ಮಂಗಳೂರು: ದ ಕ. ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಗ್ರಾಹಕ ಶಿಕ್ಷಣ ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ಪ್ರದಾನ ಸಮಾರಂಭ ಜೂನ್ 3 ರಂದು ಮಂಗಳೂರಿನ ಬಿಜೈನ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಎಂ.ಜೆ. ಸಾಲಿಯಾನ್ ವಹಿಸಿದ್ದರು.
ಕಾಲೇಜು ಗ್ರಾಹಕ ಶಿಕ್ಷಣ ಕಾರ್ಯದಲ್ಲಿ ಪುಂಜಾಲಕಟ್ಟೆ ಸರಕಾರಿ ಪದವಿ ಕಾಲೇಜು ಪ್ರಥಮ ಟ್ರೋಫಿಯನ್ನು, ಮಂಗಳೂರಿನ ಕೆನರಾ ಕಾಲೇಜು ದ್ವಿತೀಯ ಟ್ರೋಫಿಯನ್ನು, ಬಲ್ಮಠದ ಸರ್ಕಾರಿ ಕಾಲೇಜು ತೃತೀಯ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕಾಲೇಜಿನ ಉತ್ತಮ ಸಂಯೋಜಕ ಶಿಕ್ಷಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವರು - ಪ್ರಥಮ: ಪುಂಜಾಲಕಟ್ಟೆ ಸರ್ಕಾರಿ ಕಾಲೇಜಿನ ಡಾಕ್ಟರ್ ಅವಿತಾ ಮರಿಯಾ ಕ್ವಾಡರಸ್, ದ್ವಿತೀಯ ಕೆನರಾ ಕಾಲೇಜಿನ ಲವೀನಾ ಎಸ್ ನೊರೊನ, ತೃತೀಯ ಬಲ್ಮಠ ಸರ್ಕಾರಿ ಕಾಲೇಜಿನ ಡಾಕ್ಟರ್ ಮಂಜುಳಾ ಮಲ್ಯರವರು ಪಡೆದರು. ಎಸ್ ಡಿ ಎಮ್ ಕಾಲೇಜ್ ನ ಶ್ರೀಮತಿ ವೀಣಾ ಡಿ ಕೋಟ್ಯಾನ್, ಕಾವೂರು ಸರ್ಕಾರಿ ಕಾಲೇಜಿನ ಡಾ. ತೆರೇಸಾ ಪಿರೇರಾ, ಬೆಸೆಂಟ್ ಹೆಣ್ಣು ಮಕ್ಕಳ ಕಾಲೇಜಿನ ಚಂಚಲಾಕ್ಷಿ, ಪುತ್ತೂರು ಫಿಲೋಮಿನ ಕಾಲೇಜಿನ ತೇಜಸ್ವಿ ಭಟ್ ಸಮಾಧಾನಕರ ಪ್ರಶಸ್ತಿಯನ್ನು ಪಡೆದರು.
ವಿದ್ಯಾರ್ಥಿ ಮೆಡಲ್ ನೊಂದಿಗೆ ನಗದು ಪ್ರಶಸ್ತಿಗಳಲ್ಲಿ ಪ್ರಥಮ ಬಹುಮಾನವನ್ನು ಪಡೆದವರು ಕೆನರಾ ಕಾಲೇಜಿನ ದ್ವಿತೀಯ ಬಿಕಾಂನ ಗಿರೀಶ್ ನಾಯಕ್, ದ್ವಿತೀಯ ಪ್ರಶಸ್ತಿಯನ್ನು ಕೆನರಾ ಕಾಲೇಜಿನ ದ್ವಿತೀಯ ಬಿಕಾಂ ನ ಕಾರ್ತಿಕ್ ಹೊಳ್ಳ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ಪ್ರಥಮ ವರ್ಷದ ಐಶ್ವರ್ಯ ಅವರು ಪಡೆದುಕೊಂಡರು. ತೃತೀಯ ಪ್ರಶಸ್ತಿಯನ್ನು ಕೆನರಾ ಕಾಲೇಜಿನ ದ್ವಿತೀಯ ಬಿಕಾಂನ ಪಲ್ಲವಿ ಎ ಹಾಗೂ ಬೆಸೆಂಟ್ ಮಹಿಳಾ ಕಾಲೇಜಿನ ಪ್ರಥಮ ಬಿಕಾಂ ನ ಜುಲೈಕ ಇಫಿಜ ಪಡೆದುಕೊಂಡರು. ಒಕ್ಕೂಟದ ಕಾರ್ಯದರ್ಶಿ ಸುನಂದ ಕುಂಬಳೆ ಸ್ವಾಗತಿಸಿದರು. ವೇದಿಕೆಯಲ್ಲಿ ಮಂಗಳೂರಿನ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ವಸಂತಿ ಕಾಮತ್, ಒಕ್ಕೂಟದ ಉಪಾಧ್ಯಕ್ಷ ಎಡ್ರಿನ್ ಡಿ ಮೆಲ್ಲೋ, ಒಕ್ಕೂಟದ ಕಾರ್ಯಾಧ್ಯಕ್ಷ ರಫೀಕ್ ಕುಕಾಡಿ, ಕಲಾಭಾರತಿ ಆರ್ಟ್ಸ್ ನ ಮುಖ್ಯಸ್ಥೆ ಮನೋರಂಜನಿ ರಾವ್, ಒಕ್ಕೂಟದ ಖಜಾಂಚಿ ಜಯಪ್ರಕಾಶ್ ರಾವ್ ಹಾಜರಿದ್ದರು. ಒಕ್ಕೂಟದ ಜೊತೆ ಕಾರ್ಯದರ್ಶಿ ರಾಜ್ಯ ಸಂಪನ್ಮೂಲ ವ್ಯಕ್ತಿ ರಾಯಿ ರಾಜಕುಮಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಗ್ರಾಹಕ ಶಿಕ್ಷಣ ಕೋರ್ಸ ಬಗೆಗೆ ಗಿರೀಶ್ ನಾಯಕ್, ಐಶ್ವರ್ಯ, ಅವಿತಾ ಮರಿಯಾ ಕ್ವಾಡ್ರಸ್, ಲವೀನಾ ನೊರೋನ ಹಾಗೂ ಮಂಜುಳಾ ಮಲ್ಯ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವರದಿ ರಾಯಿ ರಾಜ ಕುಮಾರ್ ಮೂಡುಬಿದಿರೆ.