ಮಂಗಳೂರಿನ ವೈದ್ಯ ಹಾಗೂ ಸಾಹಿತಿ ಡಾ. ಸುರೇಶ ನೆಗಳಗುಳಿ ಇವರಿಗೆ ದಿನಾಂಕ 2 ಜೂನ್ 24 ರಂದು ಬನವಾಸಿಯಲ್ಲಿ ಶಾಲು ತೊಡಿಸಿ ಫಲ ಫಲಕ ಸಹಿತ ಪುರಸ್ಕಾರ ಮಾಡಲಾಯಿತು.
ಬನವಾಸಿಯಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ಸಮಾವೇಶ "ಪ್ರಕೃತಿಯ ಮಡಿಲು ನುಡಿಯ ಒಡಲು" ಎಂಬ ಸಾಹಿತ್ಯ ಸಮಾವೇಶದಲ್ಲಿ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರಿಗೆ ಮಂಗಳೂರಿನ ಮಾಜಿ ಡಿ.ವೈ.ಎಸ್ .ಪಿ. ಕುಮಾರಸ್ವಾಮಿ ಯವರು ಈ ಪುರಸ್ಕಾರವನ್ನು ಮಾಡಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕರ್ನಾಟಕ ಮತ್ತು ಬನವಾಸಿ ಸಮಿತಿಯ ವತಿಯಿಂದ ನಡೆಸಲಾದ ಮನೆಯಂಗಳದಿ ಸಾಹಿತ್ಯ ರಸದಿನ ಎಂಬ ಈ ಕಾರ್ಯಕ್ರಮವು ಪರಿಷತ್ತಿನ ರಾಜ್ಯ ಸಂಚಾಲಕ ಶ್ರೀ ರಘು ನಂದನ ಭಟ್ಟರ ಸಾರಥ್ಯದಲ್ಲಿ ಅವರ ನಿವಾಸದ ಹಸಿರು ವನದ ತಪ್ಪಲಲ್ಲಿ ವಿಶ್ವ ಪರಿಸರ ದಿನಕ್ಕೆ ಪೂರಕವಾಗಿ ನಡೆಯಿತು.
ನಾರಾಯಣ ಶೇವಿರೆಯವರ ದಿಕ್ಸೂಚಿ ಭಾಷಣ, ವಿದ್ಯಾರ್ಥಿ ಪ್ರಮುಖ್ ತಿಮ್ಮಣ್ಣ ಭಟ್ ಮತ್ತು ಕು.ವಿಂಧ್ಯಾ ಭಟ್ ಮಂಗಳೂರು ಸಂಗಡಿಗರಿಂದ ಮಂಕು ತಿಮ್ಮನ ಕಗ್ಗ ವಾಚನ ವ್ಯಾಖ್ಯಾನ, ವಿದ್ವಾನ್ ಉಮಾಕಾಂತ ಭಟ್ ಕೆರೆಕೈ ಯವರಿಂದ ವೇದ ಮತ್ತು ಪರಿಸರದ ಬಗೆಗಿನ ಉಪಾನ್ಯಾಸ ಹಾಗೂ ಅಬಾಶೊ ತೀರ್ಥಹಳ್ಳಿ ಸಮಿತಿ ಆದ್ಯಕ್ಷ ಅಣ್ಣಪ್ಪ ಅರಬಗಟ್ಟಿ ಮುಖ್ಯ ಅತಿಥಿಯಾಗಿ, ಶ್ರೀ ಜಗದೀಶ ಭಂಡಾರಿ ಅಧ್ಯಕ್ಷತೆಯಲ್ಲಿ ಹಲವು ಊರ ಪರ ಊರ ಕವಿಗಳಿಂದ ನಡೆದ ಪರಿಸರ ಕವಿ ಗೋಷ್ಠಿಗಳು ನೆರೆದ ರಾಜ್ಯ ಮಟ್ಟದ ಸಾಹಿತ್ಯಾಸಕ್ತರ ಮನರಂಜಿಸಿದುವು. ಡಾ ಸುರೇಶ ನೆಗಳಗುಳಿಯವರು ಬನವಾಸಿ ಶೀರ್ಷಿಕೆಯ ಸ್ವರಚಿತ ಜವನ ವಾಚಿಸಿದರು.
ಮಂಗಳೂರಿನ ಪ್ರತಿ ನಿಧಿಗಳಾಗಿ ಡಾ ಮಾಧವ,ಸುಂದರ ಶೆಟ್ಟಿ,ಜಯಾನಂದ ಪೆರಾಜೆ, ಗಣಪತಿ ಭಟ್ ಕುಳಮರ್ವ,ಪವನ್, ಸಂದೀಪ್ ,ಅರವಿಂದ ಭಟ್ ಮುಂತಾದವರು ಭಾಗವಹಿಸಿದ್ದರು