ಮಂಗಳೂರು, ಮಾ 02: ಕರಾವಳಿಯ ಉದ್ದಕ್ಕೂ ಇರುವ ಎಲ್ಲಾ ಭಾಷೆಯ, ಸಂಸ್ಕೃತಿಯ ಬಗ್ಗೆ ನಿರರ್ಗಳವಾಗಿ ಮಾತನಾಡಬಲ್ಲ ಸಮರ್ಥ ಪತ್ರಕರ್ತ, ನಿರೂಪಕ,ಸಾಹಿತಿ ಮನೋಹರ ಪ್ರಸಾದ್ ಅವರಿಗೆ ಪರ್ಯಾಯ ಹೆಸರಿಲ್ಲ ಎಂದು ಡಾ ಎಂಪಿ ಶ್ರೀನಾಥ್ ನುಡಿದರು.
ಅವರು ಎಸ್ ಡಿಎಂ ಮಂಗಳೂರು ಕಾಲೇಜು ಆವರಣದಲ್ಲಿ ದ.ಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮನೋಹರ ಪ್ರಸಾದ್ ಅವರಿಗೆ ಸಂತಾಪ ಸೂಚಿಸಿ ಮಾತನಾಡುತ್ತಿದ್ದರು. ಬಹಳ ಬೆರಗು ಮೂಡಿಸಿ ಅಕಾಲಿಕ ಮರಣ ಹೊಂದಿರುವ ಅವರು ಇನ್ನೂ ಸಾರಸ್ವತ ಲೋಕಕ್ಕೆ ದೇಣಿಗೆ ನೀಡಲು ಬಾಕಿ ಇತ್ತು ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಎಚ್ ವಿನಯ ಆಚಾರ್ಯ, ರಾಜೇಶ್ವರಿ ಎಂ, ವರ್ಕಾಡಿ ರವಿ ಅಲೆವೂರು,ದಯಾನಂದ ರಾವ್ ಕಾವೂರು,ಚಂದ್ರಶೇಖರ ನಾವಡ, ಪಿ ಮಹಮ್ಮದ್, ಪುಷ್ಕಳ್ ಕುಮಾರ್ ತೋನ್ಸೆ, ಅರುಣಾ ನಾಗರಾಜ್, ಬೈಕಾಡಿ ಜೆ ರತ್ನಾವತಿ ,ಡಾಕ್ಟರೇಟ್ ಮೀನಾಕ್ಷಿ ರಾಮಚಂದ್ರ, ರೇಮಂಡ್ ಡಿಕೂನಾ ತಾಕೊಡೆ, ಚಂದ್ರಹಾಸ ಶೆಟ್ಟಿ, ಪೂವಪ್ಪ ನೇರಳಕಟ್ಟೆ, ಡಾ ಸುರೇಶ ನೆಗಳಗುಳಿ, ಜಗದೀಶ್ ಎಡಪಡಿತ್ತಾಯ, ಮಾಧವ ಎಂಕೆ, ಸನತ್ ಕುಮಾರ್, ಗುಣವತಿ ಆರ್ ಕೆ ಇದ್ದರು.
ದ.ಕ ಕಸಾಪ ಹೋಬಳಿ ಆದ್ಯಕ್ಷರಿಗೆ ಪದಪ್ರಧಾನ
ದ.ಕ ಕಸಾಪ ಅಧ್ಯಕ್ಷ ಎಂಪಿ ಶ್ರೀನಾಥ್ ಮಂಗಳೂರು ನಗರ ಹಾಗೂ ಸುರತ್ಕಲ್ ಎರಡು ಹೋಬಳಿ ಕಸಾಪ ಅಧ್ಯಕ್ಷರಾಗಿ ಪುಷ್ಪರಾಜ್ ಹಾಗೂ ಗುಣವತಿ ಆರ್ ಕೆ ಅವರುಗಳನ್ನು ಪ್ರಮಾಣ ಪತ್ರ ನೀಡಿ ನಿಯುಕ್ತಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಪದಾಧಿಕಾರಿಗಳು ಹಾಗೂ ಸಮಿಗಳ ಸದಸ್ಯರು ಹಾಜರಿದ್ದರು.