ಮಂಗಳೂರು ಮಾ 03: ನಂತೂರಿನಲ್ಲಿರುವ ಭಾರತೀ ವಿದ್ಯಾಸಂಸ್ಥೆಯಲ್ಲಿ ಹವ್ಯಕ ಸಭಾ ಪ್ರಾಯೋಜಿತ ಉಚಿತ ಆರೋಗ್ಯ ತಪಾಸಣಾ ಶಿಬಿರವು ದಿನಾಂಕ ಮಾರ್ಚ್ 3ರಂದು ಯಶಸ್ವಿಯಾಗಿ ನೆರವೇರಿತು.
ಡಾ ರಾಜೇಂದ್ರ ಪ್ರಸಾದ, ಡಾ ಮುರಳೀ ಮೋಹನ ಚೂಂತಾರು ಸಾರಥ್ಯದ ಈ ಕಾರ್ಯಕ್ರಮವು ಅಧ್ಯಕ್ಷೆ ಗೀತಾರವರಿಂದ ಉದ್ಘಾಟಿಸಲ್ಪಟ್ಟಿತು. ಭಾರತೀಯ ವೈದ್ಯ ಪದ್ಧತಿಯ ಆಯುಷ್ ವಿಭಾಗವನ್ನು ಕಣಚೂರು ಆಯುರ್ವೇದ ಕಾಲೇಜು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಸುರೇಶ ನೆಗಳಗುಳಿ ದೀಪ ಬೆಳಗಿಸಿ ಚಾಲನೆ ಗೊಳಿಸಿದರು.
ಮಂಗಳಾ ಆಸ್ಪತ್ರೆ,ಕೆ.ಎಂಸಿ, ಎ.ಜೆ ಆಸ್ಪತ್ರೆ, ಮತ್ತಿತರ ಆಸ್ಪತ್ರೆಗಳ ಆಯಾಯ ಪ್ರಕಾರದ ಡಾ ಮುರಳೀ ಕೇಶವ ಮತ್ತಿತರ ಹಲವಾರು ವಿಭಾಗ ತಜ್ಞರಿಂದ ಹಲವಾರು ಅಪೇಕ್ಷಿಗಳು ರೋಗ ತಪಾಸಣೆ ಮಾಡಿಸಿ ಕೊಂಡರು. ಕಿವಿ ಮೂಗು ಗಂಟಲು ಕಣ್ಣು ಸ್ತ್ರೀರೋಗ ಮೂಳೆರೋಗ, ಕ್ಯಾನ್ಸರ್ ಪತ್ತೆ ಹಾಗೂ ಮಕ್ಕಳ ಚಿಕಿತ್ಸಾ ವಿಭಾಗಗಳ ತಜ್ಞರು ತಪಾಸಣೆ ಮಾಡಿದರು.
ಇದೇ ವೇಳೆ ಆಯುರ್ವೇದ ಚಿಕಿತ್ಸಕರಾಗಿ ವೇದಂ ಆಸ್ಪತ್ರೆಯ ಮುಖ್ಯಸ್ಥ ಡಾ ಕೇಶವ ರಾಜ್, ಡಾ ನಿಶ್ಚಿತ, ,ಕಣಚೂರು ಆಯುರ್ವೇದ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ ಸುರೇಶ ನೆಗಳಗುಳಿ, ಡಾ ಸೌಮ್ಯಾ ಅಶೋಕ , ಡಾ ಕಾರ್ತಿಕ್ ಮತ್ತಿತರ ವೈದ್ಯರೂ ಸಹಕರಿಸಿದರು. ಯೋಗರತ್ನ ಡಾ ಗೋಪಾಲಕೃಷ್ಣ ದೇಲಂಪಾಡಿಯವರಿಮದ ಯೋಗ ಮಾಹಿತಿಗಳೂ ನೀಡಲ್ಪಟ್ವವು.
ಮೂಳೆ ಸಾಂದ್ರತೆ, ರಕ್ತ ತಪಾಸಣೆ ಹಾಗೂ ರಕ್ತದಾನಗಳೂ ಸಹ ಇದೇ ಶಿಬಿರದಲ್ಲಿ ನಡೆಸಲ್ಪಟ್ಟವು. ಸುಮಾರು ಮುನ್ನೂರು ಮಂದಿಗಳು ಈ ಶಿಬಿರದ ಸದುಪಯೋಗ ಪಡೆದರು.