ಮುಂಬಯಿಯ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಉಪನಗರದ ಎಂಟಿಎನ್ಎಲ್ ಜಂಕ್ಷನ್ನಲ್ಲಿ ಕಟ್ಟುವ ಹಂತದ ಮೇಲ್ಸೇತುವೆ ಕುಸಿದು 14 ಜನ ಕಾರ್ಮಿಕರು ಗಾಯಗೊಂಡರು.
ಗಾಯಗೊಂಡ ಕಾರ್ಮಿಕರನ್ನು ವಿ. ಎನ್. ದೇಸಾಯಿ ಆಸ್ಪತ್ರೆಗೆ ಸೇರಿಸಲಾಗಿದೆ. ಶುಕ್ರವಾರ ಮುಂಜಾವ ನಾಲ್ಕೂವರೆ ಗಂಟೆ ದಾಟಿದ ಹೊತ್ತಿನಲ್ಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಈ ದುರಂತ ಸಂಭವಿಸಿದೆ. ಸೇತುವೆ ದಾಟು ಹಾಸು ಕುಸಿದು ಬಿದ್ದು ಅನಾಹುತ ನಡೆದಿದೆ.