ಕಲಬುರಗಿಯ ಪೋಲೀಸು ಮೈದಾನದಲ್ಲಿ ಆರಂಭವಾದ ಕಲ್ಯಾಣ ಕರ್ನಾಟಕ ಉತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕೆಕೆಆರ್‌ಡಿಬಿ ಅಭಿವೃದ್ಧಿಗೆ ರೂ. 3,000 ಅನುದಾನ ಘೋಷಣೆ ಮಾಡಿದರು.

ನಾನು ಯಾವುದೇ ಹೊಸ ಯೋಜನೆ ಘೋಷಣೆ ಮಾಡುತ್ತಿಲ್ಲ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ರೂ. 1,500 ಕೋಟಿ ಅನುದಾನ ಕೊಡುತ್ತಿದ್ದು, ಅದನ್ನು ದುಪ್ಪಟ್ಟು ಮಾಡುತ್ತಿದ್ದೇನೆ.

ಅನುದಾನದ ಮೂಲ ಕಂತಿನ ಮುಕ್ಕಾಲು ಭಾಗ ಹಣದ ಕೆಲಸ ಮುಗಿಯುತ್ತಲೇ ಹೆಚ್ಚಿಸಿದ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.