ಐಎಎಸ್‌, ಐಪಿಎಸ್ ಮಾತ್ರವಲ್ಲ, ಪಿಡಿಓದಿಂದ ರಾಷ್ಟ್ರಪತಿ ವರೆಗೆ ಆರೆಸ್ಸೆಸ್ ಜನ ಇದ್ದಾರೆ. ಮಾಜೀ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮಾಹಿತಿ ಸಾಲದು ಎಂದು ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

ಉಡುಪಿಗೆ ನೀರುಣಿಸುವ ಹತ್ತಿರದ ಕಟ್ಟೆ ಬಳಿ ಸ್ವರ್ಣ ನದಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಅಪ್ಪ ಮಗ ಗೌಡರು ಆರೆಸ್ಸೆಸ್ ಬಗೆಗೆ ಒಂದೊಂದು ಸಲ ಒಂದೊಂದು ರೀತಿ ಮಾತನಾಡಿದ್ದಾರೆ. ಆರೆಸ್ಸೆಸ್ ಜನ ಎಲ್ಲ ಹಂತದಲ್ಲಿ ಇದ್ದು ದೇಶ ಕಟ್ಟುವ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.

ಈಗಿರುವ ಐದು ರಂಗಾಯಣ ಮಾದರಿಯಲ್ಲಿ ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ ಬಳಿ ಇನ್ನೊಂದು ರಂಗಾಯಣ ಹುಟ್ಟು ಹಾಕಲಾಗುತ್ತದೆ ಎಂದೂ ಸಚಿವರು ತಿಳಿಸಿದರು.