ಕೋವಿಡ್ 19 ಒಗಟು ಲೋಕ ಬಿಟ್ಟಿಲ್ಲ. ಹೊಸ ವೇಷದ ವೈರಸ್ಗಳು ಲಸಿಕೆ ಹಾಕಿಸಿಕೊಂಡವರನ್ನೂ ಬಿಡುತ್ತಿಲ್ಲ. ಗುರುವಾರದ 24 ಗಂಟೆಗಳಲ್ಲಿ ಲೋಕದಲ್ಲಿ 6.3 ಲಕ್ಷದಷ್ಟು ಹೊಸ ಸೋಂಕಿತರು ಪಾಸಿಟಿವ್ ಪಡೆದರು. ಅದೇ ಅವಧಿಯಲ್ಲಿ ಕೊರೋನಾ ಮರಣವು ನಿನ್ನೆ 10.5 ಸಾವಿರದಷ್ಟು ಇತ್ತು. ನಿನ್ನೆಯದ್ದು ಸೇರಿ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆಯು 22,78,26,370ಕ್ಕೆ ಏರಿದೆ. ಅದೇ ಅವಧಿಯಲ್ಲಿ ನಿನ್ನೆಯದ್ದು ಸೇರಿ ಒಟ್ಟು ಕೋವಿಡ್ ಮರಣ ಹೊಂದಿದವರ ಸಂಖ್ಯೆ 46,83,977 ದಾಟಿ ಸಾಗಿದೆ.
ನಿನ್ನೆ ದಿನದ 24 ಗಂಟೆಗಳಲ್ಲಿ ಭಾರತದಲ್ಲಿ ನೋವೆಲ್ ಕೋವಿಡ್ 19 ಹತೋಟಿಗೆ ಬಂದ ಲಕ್ಷಣ ಇದೆಯೆನ್ನಲಾಗದು. ನಿನ್ನೆ ದಿನ ನಮ್ಮ ಜನ ಭಾರತ ದೇಶದಲ್ಲಿ 30,570 ಮಂದಿ ಪಾಸಿಟಿವ್ ಸಾಂಕ್ರಾಮಿಕ ಎನಿಸಿದರು. ಸೋಂಕಿತರ ಮೊತ್ತವು ಅಲ್ಲಿಗೆ 3,33,80,522ಕ್ಕೆ ಏರಿದೆ. ಗುರುವಾರ ದಿನ ದೇಶದಲ್ಲಿ 431 ನಮ್ಮ ಜನ ಕೊರೋನಾ ಸಾವು ಹೊಂದಿದರು. ದೇಶದಲ್ಲಿ ಈಗ ಕೋವಿಡ್ಗೆ ಬಲಿಯಾದವರ ಸಂಖ್ಯೆಯು 4,44,278 ದಾಟಿ ಸಾಗಿದೆ.
ರಾಜ್ಯದಲ್ಲಿ ಗುರುವಾರ ಮತ್ತೆ 1,108 ಮಂದಿ ಕೊರೋನಾ ಸಾಂಕ್ರಾಮಿಕಕ್ಕೆ ಒಳಗಾದರು. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವ್ ಪಡೆದವರ ಸಂಖ್ಯೆ 29,65,191ಕ್ಕೆ ಏರಿತು. ನಿನ್ನೆ ದಿನ ರಾಜ್ಯದಲ್ಲಿ 18 ಮಂದಿ ಕೊರೋನಾ ಮರಣ ಕಂಡರು. ಇದರೊಂದಿಗೆ ಕರ್ನಾಟಕದಿಂದ ಕೋವಿಡ್ಗೆ ಬಲಿ ಹೋದವರ ಸಂಖ್ಯೆಯು 37,555ಕ್ಕೆ ಏರಿತು.
ಗುರುವಾರದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಮೃತ್ಯು ದಂಡಕ್ಕೆ ಇಬ್ಬರು ಮರಣ ಕಂಡರು. ಒಟ್ಟು ಸಾವಿನ ಮೊತ್ತವು 1,626ಕ್ಕೆ ಏರಿದೆ. ನಿನ್ನೆಯ ದಿನ ದಕದಲ್ಲಿ 186 ಜನ ಹೊಸದಾಗಿ ಸೋಂಕು ಭಾಜನರಾದರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆ 1,12,836 ದಾಟಿ ಸಾಗಿತು.
ಉಡುಪಿ ಜಿಲ್ಲೆಯಲ್ಲಿ ನಿನ್ನೆ ಕೊರೋನಾದಿಂದ ಮರಣ ಆಗಿಲ್ಲ. ಜಿಲ್ಲೆಯಲ್ಲಿ ಕೋವಿಡ್ ಬಲಿ ಪಡೆದವರ ಸಂಖ್ಯೆಯು 459ರಲ್ಲಿದೆ. ಗುರುವಾರ ಪಾಸಿಟಿವ್ ಸಾಂಕ್ರಾಮಿಕ ಎನಿಸಿದವರ ಸಂಖ್ಯೆ 113. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆಯು 75,461ಕ್ಕೆ ಏರಿತು.