ಯಾರಯ್ಯ ದೊಡ್ಡವನು
ಗುಡಿ ಲಿಂಗದಲಿ ಶಿವನೋ ?
ಆತ್ಮದಲಿ ದೇವಸದಾಶಿವನೋ !
ಕಿಚ್ಚು ಯಾವುದು ಹೆಚ್ಚು
ಅಂತರಂಗದ ಬೆಳಕೋ
ದೇವಸ್ಥಾನದ ಛಳಕೋ !
ಕಲ್ಲಲ್ಲಿ ನೆಲೆಸಿರುವ
ಶಿವಗೆಷ್ಟು ಶಕ್ತಿ !
ಮನವೇ ಕಲ್ಲಾದಲ್ಲಿ
ಮತ್ತೆಲ್ಲಿ ಮುಕ್ತಿ ?
ಇರುಳೆಲ್ಲ ಜಾಗರಣೆ
ಉಪವಾಸ ಭಜನೆ !
ಅಂತರದ ಕತ್ತಲೆಗೆ
ಬಕುತಿಯೇ ಎಣ್ಣೆ !
ಜ್ಞಾನವೆಬುದೇ ಬತ್ತಿ
ಮಂತ್ರ ಭಜನೆಯ ಶಕ್ತಿ!
ಜಿಜ್ಞಾಸೆ ದೀಪವೇ
ದಿವ್ಯ ಜ್ಯೋತಿ !
ದೇಹದಾ ಗುಡಿಯಲ್ಲಿ
ಆತ್ಮಲಿಂಗವ ಇರಿಸಿ
ಗರ್ಭಗುಡಿಯಲ್ಲಿ ಪರಶಿವಗೆ ನಮಿಸಿ !
ಧರ್ಮ ಕಾರ್ಯವ ಮಾಡಿ
ಧರೆಯಲ್ಲಿ ಇದ್ದವಗೆ
ಈ ಲೋಕ ಶಿವಲೋಕ !
ಇದುವೇ ಮುಕ್ತಿ!
Dr. Abraje Keshava Bhat