ಕಡಲ ತೀರಕೆ ಹೋದೆ

ಕಳೆಯಲಿದೆ ಮನೆಯ ಮಾಲಿನ್ಯ !

ನನಗೆ ನಾ ಅರಿಯದೇ

ನನ್ಮನದ ಮಲೀನ !


ಇಂಪಾದ ಗಾಳಿ

ವಿಶಾಲ ಕಡಲು !

ನೆಮ್ಮದಿಯ ಹುಡುಕಿ

ಬಂದವರು ಹಲರು !


ಕಟ್ಟೊಂದು ಕೈಯಲ್ಲಿ

ತ್ಯಾಜ್ಯ ಇದೆ ಅದರಲ್ಲಿ !

ಅಲ್ಲಿಯೇ ಅದು ಬಿಟ್ಟು

ನಾನು ಹೊರಟೇ !



ಕರೆದ ಮೊರೆಯನು ಕೇಳಿ ,

ಕಡಲು ಕೈಬೀಸಿ !

ಹಿಂತಿರುಗಿ ನಾನೊಡೆ

ಒಳಗೊಳಗೇ ನುಡಿ ಎನಗೆ !


ಸಂಕುಚಿತ ಮನ ನಿನಗೆ

ಸಾಗರದ  ವಿಶಾಲತೆಯೋ !

ತೆರೆ ಎದ್ದು ಹೇಳುತಿದೆ

"ನೀನೆ ತ್ಯಾಜ್ಯ ,ಮಲಿನ ,

ನಾ ನೋಡು ಅವನಲ್ಲಿ ಲೀನಾ

ಕ್ಷೀರ ಸಾಗರ ಶಯನ  !"

 Dr. Abraje Keshava Bhat