ಭಗವಂತ! ನೀನು ಯಾಕೆ ಹೀಗೆ ಮಾಡುತ್ತಿಯಾ
ಎನ್ನುವುದು ತಿಳಿಯಲಾರೆ,
ಅತ್ತ ನೋಡಿದರೆ ಬರಗಾಲ; ಇತ್ತ ನೋಡಿದರೆ ಉಬ್ಬರ,
ಅತ್ತ ಮಳೆ ಬಂದರೆ ಸಡಗರ, ಇತ್ತ ಮಳೆ ಬಾರದೆ ಇದ್ದರೆ ಸಡಗರ
ಎಲ್ಲೆಡೆ ಆ ಪರಿಸ್ಥಿತಿ ಭೀಕರ.
ಊಟ ತಿಂಡಿ ಇಲ್ಲದೆ ಬದುಕುವುದು ಹೇಗೆ ಹೆಚ್ಚೆಂದರೆ ಎರಡು ವಾರ?
ಆ ಸಮಯ ಆಲೋಚಿಸಿದರೆ ಭಯಂಕರ.
ಆದರೆ, ಈಗಲೂ ಸಿಲುಕಿದೆ ಮಡಿಕೇರಿ, ಬಿಹಾರ.
ನಮ್ಮ ಪ್ರದೇಶಕ್ಕೂ ಹೀಗೆ ಆಗಬಹುದೇ ಎಂದು ಆಲೋಚಿಸಿದರೆ, ಅದು ಸುಲಭಕರ
ಹೇಗೆಂದರೆ ಅದು ಮನುಷ್ಯನ ಅತಿ ಆಸೆಯ ಚಮತ್ಕಾರ.
ಇನ್ನಾದರೂ ಬಳಸುವ ಪ್ಲಾಸ್ಟಿಕ್, ನೀರು ಹಿತಮಿತಕರ
ಆಗಲಾದರೂ ಬಾರದೆ ಇರುವುದು ಈ ಬರಗಾಲ, ಉಬ್ಬರ
- ವಿಜಯಲಕ್ಷ್ಮಿ. ಆರ್. ಕಾಮತ್