ಮನುಕುಲವೇ ,ಒಂದಾಗು 

ಹಿಂದುವಲ್ಲ ಕ್ರಿಸ್ತ ಮುಸಲ್ಮಾನನಲ್ಲ 

 ಜೈನ ಪಾರ್ಸಿಯು ಅಲ್ಲ 

ಕೊರೊನಕೆ ಮತವಿಲ್ಲ!

ಹೆದರಿಸಿತು ಯಮನಂತೆ ಬಹಳ 

 ಮತ ಬ್ರಾಂತಿ ಮರೆಯಾಯಿತಲ್ಲ 

ಈಗ ಜನ ಜಾತ್ರೆ ಮರುಳಂತೂ ಇಲ್ಲ !


ಭಗವಂತ ನುಡಿದ 

ಕೇಳಲಿಲ್ಲವೇ ಮನುಜಾ !

ಪರಂಪರೆಯ ಮಾತು 

ಪ್ರಾಜ್ಞೆಯೇ ಮನುಕುಲಕೆ ಧಾತು !


'ನನ್ನ ಹುಡುಕುತ ನೀನು 

ಯಾಕೆ ಅಲೆಯುವೆ ಕುರುಡ !

ನಿನ್ನೊಳಗೆ ನಾನು 

ಒಳ ತೆರೆದು ನೋಡು !'


ಕೊರೊನ ಕೇಳಿಸಿತಿಂದು :


ಯಮ ನಿಯಮ ಆಸನ 

ಪ್ರಾಣಾಯಾಮ ಧಾರಣೆ  ಧ್ಯಾನ !

ಸಮಾಜ ಸುಧಾರಣೆ ಜೀವನ   

ಅತಿ ಲೌಕಿಕಕೆ ನಿಬಂಧನ !


ಬೇಕಿಲ್ಲ ಗೊಂದಲದಿ ಜಾತ್ರೆ 

ಬಿಡಬೇಡಿ ಶುಚಿ ಶ್ರದ್ದೆ  ಮಾತ್ರೆ !

ವಿಭ್ರಾಂತಿ ಜಾತಿ ಮತ ಬೇಡ

ಸಾಮೂಹಿಕ ಶುದ್ದಿ ಬೇಕೀಗ !


ಡಾ ಅಬ್ರಾಜೆ ಕೇಶವ ಭಟ್