ಉಜಿರೆ: ಜಗತ್ತಿನೆಲ್ಲೆಡೆ ಇರುವ ಕೊರೊನಾ ಮಾರಿಯಿಂದ ಜಾಗೃತರಾಗಿರಲು ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ದೇಶದೆಲ್ಲಡೆ ಜನತಾಕಫ್ರ್ಯೂಗಾಗಿ ಕರೆ ನೀಡಿದ್ದು, ಕೊರೊನಾ ನಿರ್ಮೂಲನೆಗಾಗಿ ಶ್ರಮಿಸುತ್ತಿರುವವರಿಗೆ ಚಪ್ಪಾಳೆ ತಟ್ಟಿಕೃತಜ್ಞತೆ ಸಲ್ಲಿಸುವಂತೆ ಮನವಿಗೆ ಬಾನುವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹೆಗ್ಗಡೆಯವರ ಕುಟುಂಬಸ್ಥರು ಹಾಗು ಕ್ಷೇತ್ರದ ಸಿಬ್ಬಂದಿಗಳು ದೇವಸ್ಥಾನದ ಮುಂಭಾಗದಲ್ಲಿ ಚಪ್ಪಾಳೆ ತಟ್ಟಿಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭ ಶಂಖನಾದ, ಜಾಗಟೆ ಹಾಗೂ ಘಂಟೆಯನ್ನು ಮೊಳಗಿಸಲಾಯಿತು. ಕ್ಷೇತ್ರದ ಹೇಮಾವತಿ ವಿ.ಹೆಗ್ಗಡೆ, ಡಿ.ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಕ್ಷೇತ್ರದ ಸಿಬ್ಬಂದಿಗಳು ಇದ್ದರು.