( ಈ ಸುದ್ದಿ ಬೆಂಗಳೂರಿಗೂ ಅನ್ವಯಿಸುವಂತೆ ಕೋರಿಕೆ)

ಹೆಬ್ರಿ : 15 ವರ್ಷಗಳ ಕಾಲ ಅಕ್ರಮ ಸಕ್ರಮ ದರ್ಕಾಸು ಭೂಮಿ ಪರಭಾರೆ ನಿಷೇಧ ಕಾಯ್ದೆಯನ್ನು ಸರ್ಕಾರ ಕಳೆದ ವರ್ಷ ನಿಷೇಧ 25 ವರ್ಷಕ್ಕೆ ಏರಿಕೆ ಮಾಡಿತ್ತು. 25 ವರ್ಷಕ್ಕೆ ಏರಿಕೆ ಮಾಡಿದ್ದರಿಂದ ಜನಸಾಮಾನ್ಯರಿಗೆ ಆಗಿರುವ ತೊಂದರೆಯನ್ನು ಮನಗಂಡು ಮತ್ತೇ ನಿಷೇಧವನ್ನು 15 ವರ್ಷಕ್ಕೆ ಇಳಿಕೆ ಮಾಡಿ ಇದೇ ಫೆಬ್ರವರಿ 24ರಂದು ಸರ್ಕಾರ ಮರು ಆದೇಶ ಹೊರಡಿಸಿದೆ.

ಆದರೆ ಮರು ಆದೇಶದ ಸುತ್ತೋಲೆ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್ ಮತ್ತು ತಹಶೀಲ್ಧಾರ್ ಗಳಿಗೆ ಬಾರದೇ ಸಾರ್ವಜನಿಕರಿಗೆ ನಿರಾಕ್ಷೇಪಣಾ ದೃಡ ಪತ್ರ ಪಡೆಯಲು ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಮತ್ತು ಕಂದಾಯ ಇಲಾಖೆ ಕೂಡಲೇ ಅಧಿಕಾರಿಗಳಿಗೆ ಸುತ್ತೋಲೆ ನೀಡುವಂತೆ ಉಡುಪಿ ಜಿಲ್ಲೆಯ ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ  ಒತ್ತಾಯಿಸಿ ಸರ್ಕಾರ, ಕಂದಾಯ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

25 ವರ್ಷಗಳ ಪರಭಾರೆ ನಿಷೇಧ ಕಾಯ್ದೆಯಿಂದ ಜನತೆಗಾಗುವ ತೊಂದರೆಯನ್ನು ಮನಗಂಡು 15 ವರ್ಷಗಳಿಗೆ ಇಳಿಕೆ ಮಾಡಿದೆ. ಆದರೆ ತಿದ್ದುಪಡಿ ಕಾಯ್ದೆಯ ಸುತ್ತೋಲೆ ಕಂದಾಯ ಅಧಿಕಾರಿಗಳಿಗೆ ಬರದೇ ದೊಡ್ಡ ಸಮಸ್ಯಯಾಗಿದೆ. ಅತೀ ಶೀಘ್ರವಾಗಿ ಸುತ್ತೋಲೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ರವಾನಿಸಲಿ : ಕೆರೆಬೆಟ್ಟು ಸಂಜೀವ ಶೆಟ್ಟಿ. ಹೆಬ್ರಿಯ ಸಾಮಾಜಿಕ ಹೋರಾಟಗಾರ.