ವರದಿ ರಾಯಿ ರಾಜಕುಮಾರ ಮೂಡುಬಿದಿರೆ


ಮೂಡುಬಿದಿರೆ:   ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ ಎಂದು ಅರವಿಂದ ಬೋಳಾರ್  ನುಡಿದರು. ಅವರು ಜೂನ್ 27 ರಂದು ಎಕ್ಸಲೆಂಟ್ ವಿದ್ಯಾಸಂಸ್ಥೆಯ ವಾರ್ಷಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ದೀಪ ಬೆಳಗಿ ಉದ್ಘಾಟಿಸಿದರು. ಶಾಲೆ ಹಾಗೂ ಮನೆಯೊಂದಿಗೆ ಕಲೆಯನ್ನು ಸಮಾನವಾಗಿ ಪ್ರೀತಿಸಿ ಪರಿಸರವನ್ನು ಸಂರಕ್ಷಿಸಲು ಕೇಳಿಕೊಂಡರು. ಸಾಧನೆಗೆ ವಿದ್ಯೆಯೇ ಪ್ರಧಾನ ಆದುದರಿಂದ ಮನಸ್ಸಿಟ್ಟು ಕಲಿಯಲು ತಿಳಿ ಹೇಳಿದರು.

ವಿದ್ವಾನ್ ಯಶವಂತ ಎಂ ಮುಖ್ಯ ಅತಿಥಿಯಾಗಿದ್ದು ಇಚ್ಛಾಶಕ್ತಿ, ದೈವೀ ಶಕ್ತಿ, ಆತ್ಮವಿಶ್ವಾಸ ಇದ್ದರೆ ಏನನ್ನೂ ಸಾಧಿಸಬಹುದು ಎಂದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಕಲೆಯಲ್ಲಿ ನೈಪುಣ್ಯ ಸಾಧಿಸಲು ಪ್ರಯತ್ನ ಅತಿಮುಖ್ಯ ಎಂದರು. ಪ್ರತಿಭೆಯನ್ನು ರೂಡಿಸಿ, ಬಳಸಿ, ಬೆಳೆಸಿಕೊಳ್ಳಲು ಅಧ್ಯಕ್ಷ ಯುವರಾಜ್ ಜೈನ್ ಕರೆಕೊಟ್ಟರು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಖ್ಯ ಶಿಕ್ಷಕ ಶಿವ ಪ್ರಸಾದ್ ಭಟ್, ಪ್ರಾಂಶುಪಾಲ ಪ್ರಸಾದ್, ಜಯಶೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಕಾಂಕ್ಷಾ ಜೈನ್ ಸ್ವಾಗತಿಸಿದರು. ಜಯಲಕ್ಷ್ಮಿ, ಅದಿತಿ ಕಾರ್ಯಕ್ರಮ ನಿರೂಪಿಸಿದರು. ನಕ್ಷತ್ರ ವಂದಿಸಿದರು.