ತುಳು ಸಿನಿಮಾರಂಗದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಮತ್ತೆ ಸುದ್ದಿಯ ಲ್ಲಿದ್ದಾರೆ. ಈ ಬಾರಿ ಅವರು ಸುದ್ದಿ ಯಾಗಿದ್ದು ತುಳುವಿನಲ್ಲಿ ಸಿನಿಮಾವನ್ನು ನಿರ್ದೇಶಿಸುವ ಮೂಲಕ ತುಳು ಸಿನಿ ಮಾರಂಗದಲ್ಲಿ ಗಿರಿಗಿಟ್ ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ತುಳು ಚಿತ್ರರಂಗದಲ್ಲಿ ಬಹು ಬೇಡಿ ಕೆಯ ನಟರಾದರು. ಈ ಮಧ್ಯೆ ಕನ್ನಡ ದಲ್ಲಿ ಗೋವಿಂದಾ ಗೋವಿಂದಾ    ಸಹಿತ ಎರಡು ಮೂರು ಸಿನಿಮಾದ ಲ್ಲೂ ನಟಿಸಿದ್ದರು. 

ಕಳೆದ ವರ್ಷ ಲಾಕ್‍ಡೌನ್ ಸಂದ ರ್ಭ ಇದೇ ತಂಡದಿಂದ  ತೆರೆಕಂಡ ಗಮ್ಜಾಲ್ ಕೂಡಾ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದೀ ಗ ರೂಪೇಶ್ ಶೆಟ್ಟಿ ಸರ್ಕಸ್ ಸಿನಿಮಾ ನಿರ್ಮಾಣದಲ್ಲಿ ಕಾರ್ಯನಿರತರಾಗಿ ದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರೈಸಿ ಮುಂದಿನ ಹಂತದ ಕೆಲಸ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ಪ್ರತೀ ಚಿತ್ರದಲ್ಲೂ ಹೊಸತನ ಬಯ ಸುವ ರೂಪೇಶ್ ಈ ಬಾರಿ ಕೂಡಾ ಒಂದು ಉತ್ತಮ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಗಿರಿಗಿಟ್, ಗಮ್ಜಾಲ್‍ಗೆ ಸಂಭಾಷಣೆ ಬರೆದ ಪ್ರಸಣ್ಣ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ ಸಂಭಾ ಷಣೆ ಬರೆದಿದ್ದಾರೆ. ರೂಪೇಶ್ ಶೆಟ್ಟಿ ಅವರು ತನ್ನದೇ ಆದ ಒಂದು ತಂಡವನ್ನು ಕಟ್ಟಿಕೊಂಡಿದ್ದಾರೆ. ಹೀಗಾ ಗಿ ಅವರ ಕೆಲಸಕಾರ್ಯ ಗಳು ಅವರು ಎಣಿಸಿದಂತೆ ಬಹು ಸುಲಭ ಆಗುತ್ತಿದೆ.

ರೂಪೇಶ್ ಈ ಬಾರಿ ತುಳುವಿ ಗೊಬ್ಬ ಹೊಸ ಖಳನಟನನ್ನು  ಪರಿಚ ಯಿಸುತ್ತಿದ್ದಾರೆ. ಯಶ್ ಶೆಟ್ಟಿ ಎಂಬ ವರು ಸಲಗ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಬಂದವರು. ಯಶ್ ಈಗ ಸರ್ಕಸ್ ಸಿನಿಮಾದಲ್ಲಿ ಅಭಿನಯಿ ಸುತ್ತಿದ್ದಾರೆ. ಅದೇ ರೀತಿ ರಚನಾ ರೈ ಎಂಬ ನಟಿಯನ್ನು ರೂಪೇಶ್ ತುಳು ವಿಗೆ ಪರಿಚಯಿಸುತ್ತಿದ್ದಾರೆ. ಗಿರ್‍ಗಿಟ್ ತುಳು ಚಿತ್ರಗಳ ಪೈಕಿ ಅತ್ಯಂತ  ಯಶಸ್ವಿ ಯಾದ ಹಾಸ್ಯಮಯ ಚಿತ್ರ. ಹಲವು ದೇಶಗಳಲ್ಲಿ ಗಿರಿಗಿಟ್ ಬಿಡುಗಡೆ ಗೊಂಡು ಭರ್ಜರಿ ಪ್ರದರ್ಶನ ಕಂಡಿದೆ. ಈಗ ಅದೇ ತಂಡದವರು ಸರ್ಕಸ್ ಆರಂಭಿಸಿದ್ದಾರೆ. 

ಸರ್ಕಸ್ ಶೀರ್ಷಿಕೆ ಕನ್ನಡದಲ್ಲಿ ಈಗಾಗಲೇ ಯಶಸ್ವಿಯಾದ ಚಿತ್ರದ ಹೆಸರು. ಹಿಂದಿಯಲ್ಲೂ ಮುಂದಿ ನ ವರ್ಷ ಇದೇ ಹೆಸರಿನ ಚಿತ್ರವೊಂದು ತೆರೆ ಕಾಣಲಿದೆ. ತುಳು ಚಿತ್ರಗಳ ಸಾಮಾನ್ಯ ಪ್ರಕಾರವೇ ಹಾಸ್ಯ. ಸರ್ಕಸ್ ನಲ್ಲೂ ಅದೇ ಪ್ರಧಾನ ವಸ್ತು. ರೂಪೇ ಶ್ ಶೆಟ್ಟಿ ನಿರ್ದೇಶಿಸಿ ಪ್ರಧಾನ ಪಾತ್ರ ನಿರ್ವಹಿಸುತ್ತಿದ್ದಾರೆ. 

ಇಲ್ಲಿ ರಾಕೇಶ್ ಕದ್ರಿ  ಕ್ರಿಯೆಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ತುಳು ಚಿತ್ರರಂಗದ ಘಟಾನುಘಟಿ ಕಲಾವಿದರಾದ ನವೀನ್ ಡಿ. ಪಡೀಲ್,  ಭೋಜರಾಜ ವಾಮಂ ಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ ಕುಡ್ಲ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿ ಬೆಟ್ಟು, ಉಮೇಶ್ ಮಿಜಾರ್, ಚಂದ್ರ ಹಾಸ ಉಳ್ಳಾಲ್, ನಿತೇಶ್ ಶೆಟ್ಟಿ ಎಕ್ಕಾ ರ್, ರೂಪಾ ವರ್ಕಾಡಿ, ಪಂಚಮಿ ಭೋಜರಾಜ್, ತಾರಾಗಣದಲ್ಲಿದ್ದಾರೆ. ಸದ್ಯ ಟಾಕಿಭಾಗದ ಚಿತ್ರೀಕರಣ ಮುಗಿದಿದೆ. ಬಳಿಕ ಹಾಡುಗಳ ಚಿತ್ರೀಕರಣ ನಡೆಯಲಿದೆ. ಒಟ್ಟು 25 ದಿನಗಳ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ಹೇಳಿದೆ. ಆರ್‍ಎ ಸ್ ಸಿನಿಮಾ ಮತ್ತು ಶೂಲಿನ್ ಫಿಲ್ಮ್ ಲಾಂಛನದಡಿಯಲ್ಲಿ ಸರ್ಕಸ್ ಸಿನಿಮಾ ತಯಾರಾಗುತ್ತಿದೆ. ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ, ಮಂಜುನಾಥ ಅತ್ತಾ ವರ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಮಂಗಳೂರು, ಮರವೂರು ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಚಿತ್ರೀ ಕರಣ ನಡೆದಿದೆ. 

ಸಂಭಾಷಣೆ ಪ್ರಸಣ್ಣ ಶೆಟ್ಟಿ ಬೈಲೂರು, ನವೀನ್ ಶೆಟ್ಟಿ ನೃತ್ಯ ನಿರ್ದೇಶನ, ನಿರಂಜನದಾಸ್ ಕ್ಯಾಮ ರಾ, ರಾಹುಲ್ ವಶಿಷ್ಠ ಸಂಕಲನ ಈ ಚಿತ್ರಕ್ಕಿದೆ. ಕೋವಿಡ್ ಪರಿಸ್ಥಿತಿ ತಿಳಿ ಯಾಗಿ ನಿರ್ಬಂಧಗಳು ಸಡಿಲವಾದ ಬಳಿಕ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ನಟ, ನಿರ್ದೇಶಕ ರೂಪೇಶ್ ಶೆಟ್ಟಿ ತಿಳಿಸಿದ್ದಾರೆ. ಗಿರಿಗಿಟ್ ಬಳಿಕ ರೂಪೇಶ್ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ.