ಮಂಗಳೂರು: ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರ ವತಿಯಿಂದ ಜಿಲ್ಲಾ ಸಲಹಾ ಸಮಿತಿ 2021- 2022 ನೇ ಸಾಲಿನ ಸಭೆಯನ್ನು ದಿನಾಂಕ 29 -3- 2022 ಮಂಗಳವಾರ ಬೆಳಿಗ್ಗೆ 10.30 ಗೆ ಸರಿಯಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕೋರ್ಟ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಡಾ. ರಾಜೇಂದ್ರ ಕೆ ವಿ IAS ಜಿಲ್ಲಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ 2021-2022 ನೇ ಸಾಲಿನ ಕಾರ್ಯಚಟುವಟಿಕೆಗಳ ವರದಿ ಮಂಡನೆಯನ್ನು  ರಘುವೀರ್ ಸೂಟರ್ಪೇಟೆ, ಜಿಲ್ಲಾ ಯುವ ಅಧಿಕಾರಿ, ನೆಹರು ಯುವ ಕೇಂದ್ರ, ಮಂಗಳೂರು ಇವರು ನೆರವೇರಿಸಿದರು.

ನೆಹರು ಯುವ ಕೇಂದ್ರ ಮಂಗಳೂರು ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ  ಹಾಗೂ  ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಮತ್ತು ಪರಿಸರ ಸಂರಕ್ಷಣೆ, ಹಾಗೂ ಯುವಜನರಿಗೆ ಉದ್ಯೋಗದ ಬಗ್ಗೆ ವಿವಿಧ ಇಲಾಖೆಗಳ ಸಹಕಾರದಲ್ಲಿ ಪ್ರಸತ್ತ ಸಾಲಿನಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಲೀಡ್ ಬ್ಯಾಂಕ್ ಆಫೀಸರ್ ಪ್ರವೀಣ್ ಅವರು ಡಿಜಿಟಲ್ ಸಾಕ್ಷರತೆಯ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಡಾ.ಕಿಶೋರ್ ವೈದ್ಯಾಧಿಕಾರಿಗಳು, ವಿವೇಕಾನಂದ ಜಿ.ಉಪನಿರ್ದೇಶಕರು ಡಿ‌.ಐ.ಸಿ, ಡಾ.ನಾಗರತ್ನ ಕೆ.  ಎಎನ್.ಎಸ್.ಎಸ್, ಕಾರ್ಯಕ್ರಮ ಸಂಯೋಜಕರು, ಮಂಗಳೂರು ವಿಶ್ವವಿದ್ಯಾನಿಲಯ, ವಿಠ್ಠಲ್, ಎನ್.ಸಿ.ಸಿ ಅಧಿಕಾರಿ ಮಂಗಳೂರು, ಪ್ರವೀಣ್ ಎಮ್.ಪಿ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ದಕ್ಷಿಣ ಕನ್ನಡ, ಸರೋಜಿನಿ, ಸಹಾಯಕ ಯೋಜನಾಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪ್ರದೀಪ್ ಡಿ ಸೋಜಾ ಉಪನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಜಿ ನರೇಂದ್ರ ಬಾಬು ಕಾರ್ಯನಿರ್ವಾಹಕ ಇಂಜಿನಿಯರ್ ಜಿಲ್ಲಾ ಪಂಚಾಯತ್ ಮಂಗಳೂರು, ಶ್ರೀ ಕುಸುಮ ತಾರ ಬಿ.ಕೆ ಕಾರ್ಯದರ್ಶಿ ಯುವ ರೆಡ್ ಕ್ರಾಸ್, 

ಎಸ್ ಜೆ ಹೇಮಚಂದ್ರ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ದಕ್ಷಿಣ ಕನ್ನಡ, ಜಿತ್ ಮಿಲನ್ ರೋಚ್ ಪರಿಸರವಾದಿ , ಜಗದೀಶ್ ಕೆ ಎ.ಎ ನೆಹರು ಯುವ ಕೇಂದ್ರ ಮಂಗಳೂರು, ನೆಹರು ಯುವ ಕೇಂದ್ರದ ಯುವ ಪ್ರತಿನಿಧಿಗಳಾದ ಶ್ರೀ ಪ್ರೀತೇಶ್ , ಶ್ರೀಮತಿ ಸುಶ್ಮಿತಾ ಬಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.