ರಾಜ-ಮಹಾರಾಜರ ಕಾಲದಲ್ಲಿ ಅವರ ದೇಶ-ಸಂಚಾರ, ದೇಶ-ವಿಸ್ತಾರ ಇತ್ಯಾದಿ ಸಂದರ್ಭದಗಳಲ್ಲಿ ಜನರ ಆಶೋತ್ತರಗಳಿಗೆ ತಕ್ಷಣ ಸ್ಪಂದಿಸಿ ಸಾಮಾನ್ಯರ ಒಳಿತಿಗಾಗಿ ಉಂಬಳಿಗಳನ್ನು ಬಿಡುವ ಕ್ರಮ ಜಾರಿಯಲ್ಲಿತ್ತು. ಆದರೆ ಇಂದು ಅಂತಹ ರಾಜ-ಮಹಾರಾಜರುಗಳೂ ಇಲ್ಲ, ಜನರ ಬೇಕು-ಬೇಡಗಳನ್ನು ಕಂಡು ಪರಿಹರಿಸಿ ಸುಭಿಕ್ಷೆ ಉಂಟು ಮಾಡುವ ಮಹಾನುಭಾವರುಗಳೂ ಇಲ್ಲ. ಸರ್ವಾಧಿಕಾರಿ ಆಡಳಿತದಲ್ಲೂ ಕೂಡಾ ಸಾಮಾನ್ಯ ಜನರ ಪಾಡು ಬಹಳ ಉತ್ತಮಗೊಂಡ ಉದಾಹರಣೆ ಇಲ್ಲವೇ ಇಲ್ಲ. ಹೀಗಿರುವಾಗ ಮಠ-ಮಾನ್ಯಗಳಿಗೆ ಉಂಬಳಿ ಬಿಡುವದೇ, ಹೇಗೆ ಸಾಧ್ಯ? ಉಂಬಳಿ ಎಂದಾಕ್ಷಣ ಹೆಚ್ಚಿನವರಿಗೆ ಆ ಬಗೆಗೆ ತಿಳಿದೇ ಇಲ್ಲ, ಎನ್ನಬಹುದು. ಉಂಬಳಿ ಎಂದರೆ ಯಾವುದೇ ಒಂದು ಮಠ-ಮಾನ್ಯ, ದೇವಾಲಯ, ಇತ್ಯಾದಿಗಳ ವಾರ್ಷೀಕವಾಗಿ ನೋಡಿಕೊಳ್ಳುವುದಕ್ಕೆ ಬೇಕಾಗುವ ಖರ್ಚು-ವೆಚ್ಚಕ್ಕೆ ಸರಿಸಮನಾದ ಆದಾಯ ಮೂಲವನ್ನು ಒದಗಿಸುವ ಮೂಲ. ಅಂತಹ ಮೂಲದ ಆಸರೆ ಭೂಮಿ, ಸಂಪತ್ತು, ನಿರ್ದಿಷ್ಟ ಸಂದಾಯ , ಇಂತಹ ಯÁವುದೇ ರೂಪದಲ್ಲೂ ಇರಬಹುದು. ಇದರಿಂದಾಗಿ ಅಧಿಕಾರದಲ್ಲಿದ್ದವರೂ ಸಂಬಂಧಿತ ವ್ಯವಸ್ಥೆಯ ಪಾಲುದಾರರಂತೆ ವರ್ತಿಸಿದಂತಾಗುತ್ತಿತ್ತು.

ಇಂದು ಅಂತಹ ಯಾವ ಉಂಬಳಿ ಮಾನ್ಯತೆಯೂ ಇಲ್ಲದಿದ್ದರೂ ಕೂಡಾ ಕೊರೊನಾದ ಹೊಡೆತ ಅಂತಹ ಉಂಬಳಿಯನ್ನು ನೆನಪಿಸಿದೆ. ಇದು ರಾಜ-ಮಹಾರಾಜರ ಬದಲಿಗೆ ಸಾಮಾನ್ಯರ ಉಂಬಳಿಯಂತೆ ಬದಲಾಗಿದೆ. ಮೊನ್ನೆ ನಡೆದ ಚುನಾವಣೆಯ ಫಲಿತಾಂಶ ಬರುವ ಮೊದಲೇ ಜನರು ಕೊರೊನಾದ ಹೊಡೆತಕ್ಕೆ ತತ್ತರಿಸುತ್ತಿದ್ದಾರೆ. ಈ ಕೊರೊನಾ ಎಂಬ ಉಂಬಳಿಯನ್ನು ಕೊಡುತ್ತಿರುವವರೂ ಕೂಡಾ ನಮ್ಮವರೇ. ಚುನಾವಣೆ ನಡೆದ ಎಲ್ಲಾ ಪ್ರದೇಶಗಳಲ್ಲೂ ಜನರು ಬೇಕಾಬಿಟ್ಟಿಯಾಗಿ ವರ್ತಿಸಿ, ಸಿಕ್ಕಾಪಟ್ಟೆ ತಿರುಗಾಡಿ, ರಾಜಕಾರಣಿಗಳ-ಹಿಂಬಾಲಕರ ರೋಡ್-ಶೋ, ಮೆರವಣಿಗೆ, ಇತ್ಯಾದಿ ಎಲ್ಲದರಲ್ಲೂ ಮೆರೆಯುವ ಮೂಲಕ ಎಷ್ಟು ಜನ ಕೋವಿದ್‍ನ ಹಿಡಿತದಲ್ಲಿದ್ದಾರೋ ತಿಳಿಯದು. ಸರಕಾರ ಕೇವಲ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ನಿಯಂತ್ರಿಸುತ್ತಿದೆ. ಇದು ರಾಜಕೀಯ, ಸಾಮಾಜಿಕ ಕ್ಷೇತ್ರಕ್ಕೂ ಒಳಗೊಳ್ಳಬೇಕು. ಹಲವಾರು ಕಡೆಗಳಲ್ಲಿ ಆರೋಗ್ಯ ಕಾರ್ಯಕರ್ತರು, ಅಧಿಕಾರಿಗಳು, ಪೋಲೀಸರು ನಿಯಂತ್ರಣದ ಪ್ರಯತ್ನ ಮಾಡುತ್ತಿದ್ದರೂ ಸಹ ಅವೆಲ್ಲವೂ ಕೇವಲ ನಾಮಕಾವಾಸ್ತೆಯÀಂತಾಗಿದೆ. ಸೂಕ್ತ ನಿಯಂತ್ರಣವನ್ನು ಹೇರದೇ, ತೀಕ್ಷ್ಣ ಕ್ರಮ ಕೈಗೊಳ್ಳದೇ, ಸಾರ್ವಜನಿಕರನ್ನು ನಿಯಂತ್ರಿಸುವುದು ಸಾಧ್ಯವೇ ಇಲ್ಲ. ಈ ರೀತಿಯ ಕಟ್ಟು ನಿಟ್ಟಿನ ನಿಯಂತ್ರಣವಿಲ್ಲದೇ ಕೊರೊನಾದ ಹರಡುವಿಕೆ ತಡೆಯಲು ದುಸ್ಸಾಧ್ಯ.

ಸರಕಾರದ ಮಂದಿ, ಸಚಿವರುಗಳು, ಸಾವಿರಾರು-ಲಕ್ಷಗಟ್ಟಲೆ ಸಾರ್ವಜನಿಕರುಗಳು ಕೋವಿಡ್‍ನ ತೆಕ್ಕೆಯಲ್ಲಿ ಒದ್ದಾಡುತ್ತಿದ್ದಾರೆ, ಬಳಲುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ, ಕಟ್ಟುನಿಟ್ಟಿನ ಕ್ರಮ ರಹಿತ ವರ್ತನೆಯಿಂದ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಅದೇ ರೀತಿ 10 ನೇ ತರಗತಿಯ ಮೇಲಿನ ಎಲ್ಲಾ ವಿದ್ಯಾರ್ಥಿಗಳ ಸಾರ್ವಜನಿಕ ತಿರುಗುವಿಕೆಯಿಂದ ಎಷ್ಟು ಮಂದಿ ಕೊರೊನಾದ ತೊಂದರೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಯಬೇಕಿದ್ದರೆ ಸ್ವತ: ಅವರೆಲ್ಲರ ಚೆಕ್ ಅಪ್ ಮಾಡಬೇಕಾಗುತ್ತದೆ. ಶೀತ, ಜ್ವರ ಇತ್ಯಾದಿ ತೊಂದರೆಯಿಂದ ಬಳಲುತ್ತಿರುವ ಹಲವಾರು ವಿದ್ಯಾರ್ಥಿಗಳು, ಶಿಕ್ಷಕರುಗಳು, ಇತ್ಯಾದಿ ಮಂದಿ ಎಲ್ಲವನ್ನೂ ಮುಚ್ಚಿಟ್ಟು ವಿದ್ಯೆಗಾಗಿ ಶಾಲೆ-ಕಾಲೇಜುಗಳಿಗೆ ತಿರುಗಾಡುತ್ತಿದ್ದಾರೆ. ಅವರೆಲ್ಲರೂ ಗುಂಪು-ಗುಂಪಾಗಿ ತಿರುಗಾಡುವುದು, ಒಂದೇ ಬೆಂಚುಗಳಲ್ಲಿ 4-5 ಮಂದಿ ಒಟ್ಟಿಗೇ ಕುಳಿತುಕೊಳ್ಳುವುದು, ಒಂದೇ ತರಗತಿಯÀಲ್ಲಿ 50-60 ಮಂದಿ ಇರುವುದು, ಒಟ್ಟಿಗೇ ಕುಳಿತು ಚರ್ಚಿಸುವುದು, ಸಾರ್ವಜನಿಕ ಸಾರಿಗೆಯಲ್ಲಿ ಮುನ್ನೆಚ್ಚರಿಕೆ ಇಲ್ಲದೆ ತಿರುಗಾಡುವುದು ಇತ್ಯಾದಿ ಸಾಮೂಹಿಕ ಕ್ರಮಗಳಿಂದಾಗಿ ಒಬ್ಬ ವಿದ್ದÁರ್ಥಿಗೆ, ಶಿಕ್ಷಕರಿಗೆ ಇರುವ ಕೊರೊನಾ ಇತರರಿಗೆ ಹರಡಲು ಹೆಚ್ಚು ಸಮಯ ಬೇಕಾಗಿಯೇ ಇಲ್ಲ ಅಲ್ಲವೇ? ಆದರೂ ಕೂಡಾ ಸರಕಾರದ ಮಂದಿ ಸೂಕ್ತ ಮುನ್ನೆಚ್ಚರಿಕೆ ವಹಿಸುತ್ತಿಲ್ಲ. ಪರೀಕ್ಷೆಯನ್ನೇನೋ ದೂರ ಕುಳ್ಳಿರಿಸಿ ಮಾಡ ಬಹುದು ಆದರೆ ಒಂದು ತರಗತಿಯ ವಿದ್ಯಾರ್ಥಿಗಳ ಸಂಖ್ಯೆ, ಅವರ ಚರ್ಚೆ, ಸಾರ್ವಜನಿಕ ಓಡಾಟ, ಸಾರ್ವಜನಿಕ ವಾಹನಗಳ ಬಳಕೆ ಇತ್ಯಾದಿ ಸೂಕ್ತವಾಗಿದೆಯೇ?

ಕೊರೊನಾದ ಪ್ರಾರಂಭದ ಅಲೆಯ ಸಂದರ್ಭದಲ್ಲಿ ಎಲ್ಲ ಕಡೆ, ವಾಹನಗಳು, ಶಾಲೆ-ಕಾಲೇಜುಗಳೆಲ್ಲವನ್ನೂ ಸ್ಯಾನಿಟೈಸರ್, ಇತ್ಯಾದಿಗಳಿಂದ ಶುಚಿಗೊಳಿಸುವ, ಇತ್ಯಾದಿ ಕಾರ್ಯಗಳು ನಡೆಯುತ್ತಿದ್ದವು. ಆದರೆ ಇಂದು ಕಾನೂನು ಮಾತ್ರ ದಾಖÀಲೆಯಲ್ಲಿ ಇದೆಯೇ ಹೊರತು ಎಲ್ಲೂ ಏನೂ ನಡೆಯುತ್ತಿಲ್ಲ. ಕೇವಲ ಕೆಲವು ವ್ಯಕ್ತಿಗಳು ಮಾತ್ರ ಸ್ಯಾನಿಟೈಸರ್ ಉಪಯೋಗಿಸುತ್ತಿದ್ದಾರೆ. ಉಳಿದಂತೆ ಯಾವುದೇ ಕಡೆಗಳಲ್ಲಿ, ಸಾರ್ವಜನಿಕರು ಉಪಯೋಗಿಸುವ ಕಡೆಗಳಲ್ಲಿ ಶುಚಿಗೊಳಿಸುವ ಪ್ರಕ್ರಿಯೆ ನಡೆಯುತ್ತಿಲ್ಲ. ಸೂಕ್ತ ಮುನ್ನೆಚ್ಚರಿಕೆಯೂ ಇಲ್ಲ, ಸ್ವಚ್ಛತೆಯೂ ಇಲ್ಲ, ಆರೋಗ್ಯ ಚೆಕ್ ಅಪ್ ಕೂಡಾ ಇಲ್ಲ. ಈ ಎಲ್ಲಾದರ ಫಲವೇ ಇಂದು ನಾವು ಕಾಣುತ್ತಿರುವ, ವ್ಯಾಪPವಾಗಿÀ ಹರಡುತ್ತಿರುವ ಕೊರೊನಾ. ಹೀಗಾಗಿ ಇದು ನಮ್ಮವರದ್ದೇ ಉಂಬಳಿ ಅಲ್ಲವೇ?

ಇಂತಹ ಉಂಬಳಿಯನ್ನು ಅಲ್ಲಲ್ಲೇ ತಡೆದು ಸಮಾಜವನ್ನು ಕಾಪಾಡಬೇಕಿದ್ದರೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸೂಕ್ತ ಅಂತರ ಕಾಪಾಡಿಕೊಂಡು, ಸಾರ್ವಜನಿಕವಾಗಿ ಬೆರೆಯದೇ, ಸಾರ್ವಜನಿಕವಾಗಿ ಅನಗತ್ಯ ತಿರುಗಾಡದೇ, ಸಾಧ್ಯವಾದಷ್ಟೂ ಸಾರ್ವಜನಿಕ ವಾಹನಗಳನ್ನು ಬಳಸದೇ ಪ್ರತ್ಯೇಕತೆಯನ್ನು ಕಾಪಾಡಿಕೊಂಡು, ತರಗತಿಯನ್ನು ನಡೆಸುವುದಿದ್ದರೂ ಕೂಡಾ ಅತ್ಯಂತ ಕನಿಷ್ಠ 10-15 ವಿದ್ಯಾರ್ಥಿ ಸಂಖ್ಯೆಯೊಂದಿಗೆ ನಡೆಸಬಹುದು. ಪ್ರತೀ ಸಾರ್ವಜನಿಕ ಪ್ರದೇಶಗಳನ್ನೂ ಶುಚಿಗೊಳಿಸುವ ಕೆಲಸ ಆಗಲೇ ಬೇಕಿದೆ. ಅದೇ ರೀತಿ 10 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಚುಚ್ಚುಮದ್ದು ನೀಡುವಂತಾಗಬೇಕು. ಎಲ್ಲರ ಆರೋಗ್ಯ ಚೆಕ್ ಅಪ್ ಕೂಡಾ ಆಗಲೇ ಬೇಕು. ಇದೆಲ್ಲವೂ ಆದರೆ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯವಾಗಬಹುದು.


-By ರಾಯೀ ರಾಜಕುಮಾರ್,ಮೂಡುಬಿದಿರೆ