ಮಂಗಳೂರು: ಮಂಗಳೂರು ಮೇರಿಹಿಲ್ ಕೊಂಚಾಡಿಯ ನಿವಾಸಿ, ಖ್ಯಾತ ಜ್ಯೋತಿಷಿ ಕೆ. ದೇವದಾಸ್ ಕಿಣಿ (70ವ.) ಇವರು ಡಿ. 6ರಂದು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ರಥಬೀದಿಯ ಖ್ಯಾತ ಜ್ಯೋತಿಷಿಯಾಗಿದ್ದು ಮಹಾಲಸಾ ಪಂಚಾಂಗವನ್ನು ರಚಿಸಿದ್ದರು. 1985ರಲ್ಲಿ ಪ್ರಥಮ ಬಾರಿಗೆ ಬೇಸಿಕ್ ಕಂಪ್ಯೂಟರ್ ಲ್ಯಾಂಗ್ವೇಜ್‍ನಲ್ಲಿ ಕಂಪ್ಯೂಟರ್ ಜಾತಕವನ್ನು ತಯಾರಿಸಿ ಇಂದಿನವರೆಗೆ ಅನೇಕರಿಗೆ ಮಾರ್ಗದರ್ಶಿಯಾಗಿದ್ದರು.  ಇವರು ಅನೇಕರಿಗೆ ಜ್ಯೋತಿಷ್ಯ ಶಾಸ್ತ್ರವನ್ನು ಕಲಿಸಿದ್ದರು. ಮೃತರು ಪತ್ನಿ, ಪುತ್ರ ಡಾ| ಆನಂದ ಕಿಣಿ ಹಾಗೂ ಓರ್ವ ಪುತ್ರಿಯನ್ನು ಅಗಲಿರುತ್ತಾರೆ.