1. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಯುವ ಜನರಿಗೆ ಉದ್ಯೋಗ ಸೃಷ್ಠಿಯ ಭರವಸೆಯೊಂದಿಗೆ ಆರಂಭಗೊಂಡಿರುವ ಎಂ.ಆರ್.ಪಿ.ಎಲ್ ಕಂಪೆನಿಯು ಸ್ಥಳೀಯ ಯುವ ಜನರನ್ನು ನೇಮಕಾತಿ ಪ್ರಕ್ರಿಯೆ ಸಂದರ್ಭ ಪ್ರಜ್ಞಾ ಪೂರ್ವಕವಾಗಿ ಹೊರಗಿಡುತ್ತಾ ಬಂದಿದೆ.
2. 2021ರಲ್ಲಿ ನಡೆದ 234 ಹುದ್ದೆಗಳ ನೇಮಕಾತಿಯಲ್ಲಿ ದ.ಕ. ಜಿಲ್ಲೆಗೆ ಕೇವಲ 2, ಕರ್ನಾಟಕ ರಾಜ್ಯಕ್ಕೆ 8 ಹುದ್ದೆಗಳಿಗೆ ಮಾತ್ರ ಅವಕಾಶ ದೊರಕಿತು. ಆ ಸಂದರ್ಭ ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈಗ 50 ಹುದ್ದೆಗಳ ನೇಮಕಾತಿಯ ಸಂದರ್ಭ ಸ್ಥಳೀಯರಿಗೆ ಅವಕಾಶ ನಿರಾಕರಿಸುವ ಅದೇ ಚಾಳಿಯನ್ನು ಕಂಪೆನಿ ಮತ್ತೆ ಮುಂದುವರಿಸುವುದು ಖೇದಕರ. ಇದು ನಮ್ಮ ನಾಡಿನ ಯುವಕರಲ್ಲಿ ಅಪಾರ ನಿರಾಸೆಯನ್ನು ಮೂಡಿಸಿದೆ.
3. 2021ರ ನೇಮಕಾತಿ ಸಂದರ್ಭ ಸ್ಥಳೀಯರಿಗೆ ಆದ ಅನ್ಯಾಯದ ವಿರುದ್ಧ ಆಕ್ರೋಶ ಭುಗಿಲೆದ್ದಾಗ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಶಾಸಕರುಗಳು ಎಂ.ಆರ್.ಪಿ.ಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳೀಯ ಯುವಕ, ಯುವತಿಯರಿಗೆ ಅವಕಾಶ ಒದಗಿಸಲು ಸೂಚಿಸಿರುವುದಾಗಿ ಕಂಪೆನಿ ಅದಕ್ಕೆ ಒಪ್ಪಿಕೊಂಡಿರುವುದಾಗಿ ಹೇಳಿಕೆ ನೀಡಿದ್ದರು. ಆದರೆ ಅಂದು ಸಂಸದರು ಕೊಟ್ಟ ಪ್ರಕಟಣೆ ಜಾರಿಗೆ ಬರಲಿಲ್ಲ. ಈಗ ಸಂಸದರು ಮತ್ತೊಮ್ಮೆ ಕಂಪೆನಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳೀಯ ಯುವಕ, ಯುವತಿಯರಿಗೆ ಆದ್ಯತೆ ಒದಗಿಸಲು ಸೂಚಿಸಿರುವುದಾಗಿ ತಿಳಿಸಿರುವುದು ಹಾಸ್ಯಾಸ್ಪದವಾಗಿದೆ.
4. ಸಂಸದರಿಗೆ ನೈಜ ಕಾಳಜಿ ಇದ್ದಲ್ಲಿ ತಮ್ಮದೇ ಕೇಂದ್ರ ಸರಕಾರದ ಪೆಟ್ರೋಲಿಯಂ ಸಚಿವರಿಗೆ ಪರಿಸ್ಥಿತಿ ವಿವರಿಸಿ ಅರ್ಜಿ ಸ್ವೀಕರ ತಡೆ ಹಿಡಿಯುವಂತೆ ಮಾಡಲಿ ಎಂದು ಯುವ ಕಾಂಗ್ರೆಸ್ ಮನವಿ ಮಾಡುತ್ತದೆ.
5. ಎಂ.ಆರ್.ಪಿ.ಎಲ್, ಎಸ್.ಇ.ಝೆಡ್ ಮಾತ್ರವಲ್ಲದೆ ಮಂಗಳೂರಿನ ಬಹುತೇಕ ಉದ್ದಿಮೆಗಳಲ್ಲಿ ಉದ್ಯೋಗ ನೇಮಕಾತಿ ಸಂದರ್ಭ ಸ್ಥಳೀಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಉತ್ತರ ಭಾರತೀಯರು ಹೆಚ್ಚು ಅವಕಾಶ ಪಡೆಯುತ್ತಿದ್ದಾರೆ. ಇದು ಕರಾವಳಿ ಜಿಲ್ಲೆಯ ಯುವಕರನ್ನು ಅವಕಾಶ ವಂಚಿತರನ್ನಾಗಿಸುತ್ತದೆ.
6. ಸ್ಥಳೀಯ ಯುವಕ, ಯುವತಿಯರಿಗೆ ಅವಕಾಶ ನೀಡಿ ಹೊಸದಾಗಿ ಅರ್ಜಿ ಸ್ವೀಕಾರ ಪ್ರಕ್ರಿಯೆ ನಡೆಸಬೇಕು ಎಂಬ ಬೇಡಿಕೆ ಈಡೇರಿಕೆಗಾಗಿ ಹೋರಾಟಕ್ಕೆ ಇಳಿಯಲು ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಸಮಿತಿ ತೀರ್ಮಾನಿಸಿದೆ.
7. ಎಂ.ಆರ್.ಪಿ.ಎಲ್ ನಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶದ ಬೇಡಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವ ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಪ್ರಬಲ ಹೋರಾಟ ಸಂಘಟಿಸಲು ನಿರ್ಧರಿಸುತ್ತೇವೆ.
8. ಕೇಂದ್ರ ಸರಕಾರದ ಅಧೀನದಲ್ಲಿರುವ ಎಂ.ಆರ್.ಪಿ.ಎಲ್ ನ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಅವಕಾಶ ನಿರಾಕರಿಸುತ್ತಿರುವ ಒ.ಎನ್.ಜಿ.ಸಿಯ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ.
9. 50 ಹುದ್ದೆಗಳ ನೇಮಕಾತಿ ಅಧೀನದಲ್ಲಿರುವ ಎಂ.ಆರ್.ಪಿ.ಎಲ್ ಉದ್ಯೋಗ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಯಾವುದೇ ಆದ್ಯತೆ ಒದಗಿಸದೇ ಅರ್ಜಿಗಳನ್ನು ಆಹ್ವಾನಿಸಿರುವುದನ್ನು ಪ್ರಬಲವಾಗಿ ವಿರೋಧಿಸುತ್ತೇವೆ.
10. ಈಗ ನಡೆಯುತ್ತಿರುವ ಪ್ರಕ್ರಿಯೆಯನ್ನು ತಡೆ ಹಿಡಿದು ಸ್ಥಳೀಯರಿಗೆ ಆದ್ಯತೆಯೊಂದಿಗೆ ಹೊಸದಾಗಿ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭಿಸಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯಿಸುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಮಾನಂದ ಪೂಜಾರಿ, ದೀಕ್ಷಿತ್ ಅತ್ತಾವರ್, ಇಸ್ಮಾಯಿಲ್ ಬಿ.ಎಸ್, ಸಂಜನಾ ಚಲವಾದಿ, ಕೆ.ಪಿ.ವೈ.ಸಿ ಸಂಯೋಜಕ ಸೌಹಾನ್ ಎಸ್.ಕೆ, ಜಿಲ್ಲಾ ಕಾರ್ಯದರ್ಶಿ ಮಹೇಶ್ ಕೊಂಚಾಡಿ, ಡಿಸಿಸಿ ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.