ಉಜಿರೆ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ 56ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಶನಿವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ ಛದ್ಮವೇಷ ಸ್ಪರ್ಧೆಯ ಫಲಿತಾಂಶ
ಸೂಪರ್ ಸೀನಿಯರ್ ವಿಭಾಗ : ಸಾಮರ್ಸೆಟ್ ಬಳಗ (ಪ್ರಥಮ), ರಂಗಶಿವ ಕಲಾ ತಂಡ (ದ್ವಿತೀಯ) ಹಾಗೂ ತುಳುನಾಡ ವೈಭವ (ಪ್ರೋತ್ಸಾಹಕ), ಸೀನಿಯರ್ ವಿಭಾಗ: ದೇವಸ್ಥಾನ ಸೇವಾ ಕೌಂಟರ್ ಬಳಗ (ಪ್ರಥಮ), ಪ್ರಕಾಶ ಬಳಗ (ದ್ವಿತೀಯ)
ಮಹಿಳಾ ವಿಭಾಗ : ಲೀಲಾ ಮತ್ತು ಬಳಗ (ಪ್ರಥಮ), ಶಿಲ್ಪಕಲಾ ಬಳಗ ತಂಡ (ದ್ವಿತೀಯ), ತುಳುವೆರೆ ಬಳಗ (ತೃತೀಯ), ಜಲಜ ಬಳಗ (ದೇವಸ್ಥಾನ) ಪ್ರೋತ್ಸಾಹಕ, ಪ್ರೌಢ ಶಾಲಾ ವಿಭಾಗ : ಶ್ರೀ ಧ.ಮ.ಅ. ಪ್ರೌಢಶಾಲೆ (ಪ್ರಥಮ), ರಶ್ಮಿ ತಂಡ (ದ್ವಿತೀಯ)
ಪ್ರಾಥಮಿಕ ಶಾಲಾ ವಿಭಾಗ : ಕಿಶೋರ್ ಬಳಗ (ಪ್ರಥಮ), ಜಿಯಾ ಜೈನ್ (ದ್ವಿತೀಯ), ಅವಿಷ್ಕಾರ್ ಶೆಟ್ಟಿ (ತೃತೀಯ) , ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದು ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.