ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ರಾಜ್ಯ ಸರ್ಕಾರ ಬಗೆಹರಿಸದ ಸಮಸ್ಯೆಗಳಾದ: 9/11 ನಿವೇಶನ, ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ, ಆಶ್ರಯ ಮನೆ ಹಂಚಿಕೆ, ವಿವಿಧ ಪಿಂಚಣಿ ರದ್ಧತಿ, ಗ್ಯಾರಂಟಿ ಹೆಸರಲ್ಲಿ ವಿದ್ಯುತ್ ದರ ಏರಿಕೆ, ಇತ್ಯಾದಿಗಳ ಕುರಿತು ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ 399 ಗ್ರಾಮ ಪಂಚಾಯತ್ ಗಳ ಎದುರು ಜೂನ್ 23 ರಂದು ಏಕಕಾಲದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಅದರ ಕೆಲವು ಝಲಕ್ ಪಡುಮಾರ್ನಾಡು ಗ್ರಾಮ ಪಂಚಾಯತ್ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಮುಖರುಗಳಾದ ಪಂಚಾಯತ್ ಅಧ್ಯಕ್ಷ ವಾಸುದೇವ ಭಟ್, ದಯಾನಂದ ಪೈ, ವಿಶ್ವನಾಥ ಕಾಮತ್, ಕಲ್ಯಾಣಿ, ಶ್ರೀನಾಥ್ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು.
ದರೆಗುಡ್ಡೆ ಗ್ರಾಮ ಪಂಚಾಯತ್ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಸೂರಜ್ ಜೈನ್, ಅಶೋಕ್ ಶೆಟ್ಟಿ, ಮುನಿರಾಜ್ ಹೆಗ್ಡೆ, ಸಮಿತ್ ರಾಜ್, ಸಚಿನ್, ಸಂದೀಪ್, ಚಿತ್ತರಂಜನ್ ಕೋಟ್ಯಾನ್, ಹಾಗೂ ಇತರರು ಉಪಸ್ಥಿತರಿದ್ದರು.