ಮಂಗಳೂರು:  ಯೋಗ ದಿನಾಚರಣೆಯನ್ನು ಮಂಗಳೂರಿನ ಜಿಯೊಲಾಜಿಕಲ್ ಸರ್ವೇ ಆಫ್ ಇಂಡಿಯಾ (GSI) ಕಚೇರಿಯಲ್ಲಿ ಜೂನ್ 21 ರಂದು ಆಚರಿಸಲಾಯಿತು.

ಕಾರ್ಯಕ್ರಮವನ್ನುಸಾಗರ ಮತ್ತು ಕರಾವಳಿ ಸಮೀಕ್ಷಾ ವಿಭಾಗದ ಮುಖ್ಯಸ್ಥ ಮತ್ತು ಉಪ ಮಹಾನಿರ್ದೇಶಕ ಡಾ. ಎನ್. ಎಂ. ಶರೀಫ್ ಉದ್ಘಾಟಿಸಿದರು. ಭಾರತ ಸರ್ಕಾರದ ಆಯುಷ್ ಸಚಿವಾಲಯವು ಸೂಚಿಸಿದ ಸಾಮಾನ್ಯಯೋಗ ಶಿಷ್ಟಾಚಾರಕ್ಕೆ ಅನುಗುಣವಾಗಿ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಒಟ್ಟು 105 ಜನ ಅಧಿವೇಶನದಲ್ಲಿ ಭಾಗವಹಿಸಿದರು. ಅಧಿವೇಶನವನ್ನು ದೇಲಂಪಾಡಿ ಯೋಗ ಪ್ರತಿಷ್ಠಾನದ  ಕಾರ್ತಿಕ್ ಮತ್ತು ಹಿರಾನಿ ಮಾರ್ಗದರ್ಶನ ನೀಡಿದರು.

ಜೂನ್ 20ರಂದು ನಡೆದ ಯೋಗ ರಸಪ್ರಶ್ನೆ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಲಾಯಿತು. ಉಪ ನಿರ್ದೇಶಕ (ಪಿ&ಎ) ಹರಿಹರನ್ ಎಸ್. ವಂದಿಸಿದರು.