ಮಂಗಳೂರು:  ಬಿಕರ್ನಕಟ್ಟೆ ಇನ್ಪೆಂಟ್ ಜೀಸಸ್ ಚರ್ಚ್ನ ಸಂಪರ್ಕ ರಸ್ತೆ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರ ಅನುದಾನದಿಂದ ಸುಮಾರು 50.00ಲಕ್ಷ ವೆಚ್ಚದಲ್ಲಿ ಅತ್ಯಂತ ಸುಸಜಿತವಾದ ರಸ್ತೆಗಳನ್ನು ಮಾಡುವ ಮೂಲಕ ಈ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಕೂಡ ಬಿಡದೇ ಅತ್ಯಂತ ದುಬಾರಿ ರಸ್ತೆಯನ್ನಾಗಿ ಮಾಡಲಾಗಿದೆ. ಈ ರಸ್ತೆ ಮಾಡುವಂತಹ ಸಂದರ್ಭದಲ್ಲಿ ನೀರಿನ ಪೈಪ್ಲೈನ್, ಡ್ರೈನೇಜ್ ,ಒಳಚರಂಡಿ ವ್ಯವಸ್ಥೆ ಮತ್ತು ಕೇಬಲ್ ಅಳವಡಿಕೆ ಮತ್ತು ನೀರು ಹೋಗಲು ತೋಡು ನಾಲ್ಕು ವ್ಯವಸ್ಥೆಗಳನ್ನು ಒಟ್ಟು ಸೇರಿಸಿ, ಅದರ ಕಾಮಗಾರಿಗಳನ್ನು ಮೊದಲು ಮಾಡಿದ ನಂತರ ರಸ್ತೆಯ ಕಾಂಕ್ರೀಟೀಕರಣ ರಸ್ತೆಯನ್ನು ಮಾಡಲಾಗಿದ್ದು, ನಗರದಲ್ಲಿ ಪದೇ-ಪದೇ ರಸ್ತೆಗಳನ್ನು ಅಗೆಯುವಿಕೆಯಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದ್ದು ಇದನ್ನು ದೂರವಿಡುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿ ಈ ರಸ್ತೆಯನ್ನು ಮಾದರಿ ರಸ್ತೆಯನ್ನಾಗಿ ಮಾಡಲಾಗಿದೆ. ಎಂದು ರಸ್ತೆ ಉದ್ಘಾಟನೆ ಮಾಡಿದಂತಹ ವಿಧಾನ ಪರಿಷತ್ ಶಾಸಕರು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿಯವರು ಉದ್ಘಾಟನೆ ಮಾಡುತ್ತಾ ತಿಳಿಸಿದರು.

ಸಾರ್ವಜನಿಕ ಕೆಲಸಗಳಲ್ಲಿ ಅಭಿವೃದ್ದಿ ಕಾರ್ಯಗಳಲ್ಲಿ ರಾಜಕೀಯ ಮಾಡುವಂತದ್ದು ಇಂದಿನ ಅವಶ್ಯಕತೆ ಅಲ್ಲ ಸಮಾಜದಲ್ಲಿ ಎಲ್ಲಾ ವರ್ಗದವರಿಗೂ ತಮ್ಮ ಹಕ್ಕಿನ ಕೆಲಸ ಮಾಡಿಕೊಡಲು ಎಲ್ಲರಿಗೂ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕು ಇದು ರಾಜ್ಯ ಸರ್ಕಾರದ ಜವಬ್ದಾರಿಯಾಗಿದೆ. ಸರ್ಕಾರ ಇವತ್ತು ಸಾಕಷ್ಟು ಅಭಿವೃದ್ದಿ ಕಾರ್ಯಕ್ರಮಗಳ ಜೊತೆಗೆ ಸಮಾಜದಲ್ಲಿ  ಬದುಕು ಕಟ್ಟುವಂತಹ ಕೆಲಸವನ್ನು ಸಿದ್ದಾಮಯ್ಯನವರ ಕಾಂಗ್ರೆಸ್ ಸರ್ಕಾರ ಮಾಡಿಕೊಂಡು ಬರುತ್ತಾ ಇದೆ ಎಂದು ಇನ್ಟೆಂಟ್ ಜೀಸಸ್ನ ರಸ್ತೆ ಉದ್ಘಾಟನಾ ಸಂದರ್ಭದಲ್ಲಿ ಶ್ರೀ ಮಂಜುನಾಥ ಭಂಡಾರಿಯವರು ತಿಳಿಸಿದರು. ಈ ಸಂದರ್ಭದಲ್ಲಿ ರಸ್ತೆಗೆ ತಮ್ಮ ಪ್ರದೇಶಾಭಿವೃದ್ದಿಯಿಂದ ಅನುದಾನ ಒದಗಿಸಿಕೊಟ್ಟಂತಹ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರಿಗೆ ಸಾರ್ವಜನಿಕರ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಡಾರಿ, ಚರ್ಚ್ ನ ಧರ್ಮ ಗುರು ಫಾದರ್ ಸ್ಟೀಫನ್, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಲೀಂ, ಮಾಜಿ ಕಾರ್ಪೋರೇಟರ್ ನವೀನ್ ಡಿಸೋಜಾ, ಕೇಶವ ಮರೋಳಿ, ಅಪ್ಪಿಲತ, ಸಬಿತ ಮಿಸ್ಕಿತ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಲ್ಬಾಗ್, ಬಾಸ್ಕರ್ ರಾವ್, ಕಾಂಗ್ರೆಸ್ ನಾಯಕರುಗಳಾದ ಮನೀಶ್ ಬೋಳಾರ್, ಮನುರಾಜ್, ಇಮ್ರಾನ್ ಏ.ಆರ್, ಪ್ರವೀಣ್ ಜೇಮ್ಸ್, ಕ್ಲೇವ್ ವೆಲೆನ್ಸಿಯಾ, ಅನಿಲ್ ರಸ್ಕಿನ, ಜೋಕಿಮ್ ಡಿಸೋಜಾ, ವಿಲ್ಫ್ರೆಡ್ ಮಿನೇಜಸ್, ವಿಕ್ಟೋರಿಯಾ ಅತ್ತಾವರ್ ಉಪಸ್ಥಿತರಿದ್ದರು.