ಮಂಗಳೂರು: ಪತ್ರಕರ್ತ, ಮಾಧ್ಯಮ ಪ್ರವರ್ತಕ, ಲೇಖಕ, ಆರ್. ಬಿ. ಜಗದೀಶ್ ಮಂಗಳೂರು ಗೆ ಕನ್ನಡ ಭವನದ "ಕನ್ನಡ ಪಯಸ್ವಿನಿ ಅಚೀವರ್ಸ್ ಅವಾರ್ಡ್ 2026.ಗೆ ಆಯ್ಕೆ.

ಆರ್.ಬಿ.ಜಗದೀಶ್ ಇವರು ಕಾಸರಗೋಡು ಮೂಲದವರು. ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಕೆನರಾ ಟೈಮ್ಸ್ ಗ್ರೂಪ್, ಮಂಗಳೂರು ಮಿತ್ರ, ಜನ ಈ ದಿನ, ಪಟ್ಟಾಂಗ, ಉಡುಪಿ ನ್ಯೂಸ್, ವಿಜಯಕಿರಣ, ವಿಜಯವಾಣಿ, ಜಯಕಿರಣ, ಡಾಯ್ಜಿ ವಲ್ಡ್೯ ಮಾಧ್ಯಮಗಳಲ್ಲಿ ಪತ್ರಕರ್ತನಾಗಿ ಪ್ರಸ್ತುತ ಆರ್.ಬಿ. ನ್ಯೂಸ್ ಕನ್ನಡ ಇದರ ಸಂಪಾಕರರಾಗಿದ್ದಾರೆ.
ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ "ಕನ್ನಡ ಪಯಸ್ವಿನಿ ಪ್ರಶಸ್ತಿ 2026" ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ - ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿನಲ್ಲಿ ನೀಡಿ ಗೌರವಿಸಲಿದ್ದಾರೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.