ಉಜಿರೆ: ನವರಾತ್ರಿ ಪ್ರಯುಕ್ತ ಅಕ್ಟೋಬರ್ 1 ರಂದು ಬುಧವಾರ ರಾತ್ರಿ ದೇವಸ್ಥಾನದಲ್ಲಿ 2600 ಮುತ್ತೈದೆಯರಿಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸೀರೆಗಳನ್ನು ಪ್ರಸಾದರೂಪವಾಗಿ ವಿತರಿಸಿದರು.
ನವರಾತ್ರಿ ಪ್ರಯುಕ್ತ ಸೆಪೆಂಬರ್ 22 ರಿಂದ ಅಕ್ಟೋಬರ್ 1 ರ ವರೆಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು.
ಪ್ರತಿ ದಿನ ಸಂಜೆ ಗಂಟೆ 6 ರಿಂದ ರಾತ್ರಿ 8 ರ ವರೆಗೆ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಸಂಗೀತ, ಭಕ್ತಿಗೀತೆ, ವೀಣಾವಾದನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.