ಮೌನವಾಗಿ ಹರಿಯುವ ನದಿ ಅದೆಷ್ಟು ಅರ್ಥ ಹೊತ್ತೊಯ್ಯುತಿದೆ. ಮನದ ಭುವಿಯಲ್ಲಿ ಭಾವಗಳು ನದಿಯಾಗಿ ಹರಿಯುತ್ತಿರುತ್ತದೆ. ಆ ಭಾವಗಳ ಕಾಗದದಲ್ಲಿ ಹಿಡಿದಿಟ್ಟು ಅಕ್ಷರವಾಗಿಸಿ ಮನ ಮನಗಳ ನಡುವೆ ಸೇತುವೆಯಾಗುವುದೇ ಲೇಖನಿ.
ಒಬ್ಬ ಒಳ್ಳೆಯ ಲೇಖಕ ಒಬ್ಬ ಒಳ್ಳೆಯ ಓದುಗನು ಆಗಿರುವ ಓದಿದಷ್ಟು ಉತ್ತಮ ವಿಷಯಗಳ ಸಂಗ್ರಹವಾಗುವುದು.ಲೇಖನ ಕೇವಲ ಕಲ್ಪನೆಯಲ್ಲ ಕ್ರಾಂತಿಯೂ ಹೌದು. ಒಂದು ಕವಿತೆ ಅಥವಾ ಲೇಖನ ಓದುಗನ ಮನಸ್ಸಿನ ತುಮುಲ ದೂರ ಮಾಡಿ ಅವನ ದೃಷ್ಟಿ ಕೋನ ಬದಲಾಯಿಸಬಲ್ಲದು. ಲೇಖನ ವಿಚಾರಗಳಿಗೆ ದಿಶೆಯನ್ನು ನೀಡುವುದು ಚೂರಾದ ಕನಸುಗಳನ್ನ ಶಬ್ದಗಳ ಹೋದಿಕೆ ಹೊದ್ದಾಗ ಅರ್ಥ ಪೂರ್ಣ ರಚನೆಯಾಗುವುದು ಇದೇ ಲೇಖನ ಬದುಕಿನ ಎಲ್ಲಕ್ಕಿಂತ ಹೆಚ್ಚು ವಿಶೇಷತೆ ಹೊಂದುವುದು. ಕೆಲವು ಕಥೆಗಳಿರುತ್ತವೆ ಶಬ್ದಗಳಿಂದ ಹೇಳಲಾಗದ್ದು ಅಲ್ಲಿ ಮೌನವೇ ಆವರಿಸುತ್ತದೆ ಆ ಮೌನಕ್ಕೂ ಧ್ವನಿ ನೀಡುವ ಸಾಧನವೇ ಲೇಖನಿ. ಲೇಖನ ಜೀವ ಕಳೆದು ಕೊಂಡ ಭಾವಗಳಿಗೆ ಜೀವ ನೀಡುವ ಸಂಜೀವಿನಿ .ನಾವು ಹೇಳಲಾಗದ್ದು ಲೇಖನ ಹೇಳುತ್ತದೆ. ನಮ್ಮೊಳಗಿನ ನಮ್ಮನ್ನ ಪರಿಚಯಿಸುತ್ತದೆ.ಮನಸ್ಸು ತುಂಬಾ ಭಾರವೆನಿಸಿದಾಗ ಲೇಖನವೂ ನೆಮ್ಮದಿಯ ಸೂರು ಕಲ್ಪಿಸುವುದು. ಸುಖ ದುಃಖಗಳೆರಡಲ್ಲೂ ಜೊತೆಯಿರುವುದು ಬರವಣಿಗೆ ರೂಢಿಸಿಕೊಂಡವನಿಗೆ ಕಲ್ಪನೆಯ ಬ್ರಹ್ಮಾಂಡಕ್ಕೂ ಕರೆದೊಯ್ಯುತ್ತದೆ. ಹಾಗೂ ಸತ್ಯದ ದರ್ಶನವೂ ಮಾಡಿಸುತ್ತದೆ. ಲೇಖಕ ಘಟನೆಗಳನ್ನಷ್ಟೆ ಬರೆಯುವುದಿಲ್ಲ ಮನಸಾಕ್ಷಿಯಿಂದಲೂ ಬರೆಯುವನು ಲೇಖನ ಯಾವತ್ತೂ ಸರ್ವೊತ್ತಮವಾಗುತ್ತದೆ ಗೊತ್ತಾ..?ಲೇಖಕ ಶಬ್ದಗಳಿಗೆ ಶರಣಾದಾಗ...
ಲೇಖನದಲ್ಲಿ ತನ್ನನ್ನು ತಾನು ಕಳೆದುಕೊಂಡು ತನ್ನನ್ನು ತಾನು ಕಂಡುಕೊಳ್ಳುವುದು. ಇದೇ ಬರವಣಿಗೆಯ ಬದುಕು ಇದೇ ಅದರ ವೈಶಿಷ್ಟ್ಯ ಅಕ್ಷರಗಳ ನಂಟು ಬೆಳೆದಷ್ಟು ಮನುಷ್ಯ ಪ್ರಬುದ್ಧವಾಗುವನು ಅಹಃ ಪ್ರತಿಷ್ಠೆ ಪ್ರಶಸ್ತಿ ಪುರಸ್ಕಾರ ಎಲ್ಲವನ್ನು ಮೀರಿ ಮುನ್ನಡೆದಷ್ಟು ಶೂನ್ಯದಿಂದ ಮೌಲ್ಯಯುತ ವ್ಯಕ್ತಿತ್ವ ನಿರ್ಮಾಣವಾಗುವುದು ಆಗ ಶಬ್ದಗಳು ಬರೆಯಲಾಗುವುದಿಲ್ಲ ತನ್ನಿಂದ ತಾನೆ ಪುಸ್ತಕದಲ್ಲಿ ಇಳಿಯಲಾರಂಭಿಸುವುದು ಆಗ ಪ್ರಶ್ನೆಗಳಿರುವುದಿಲ್ಲ ಜಟಿಲ ಪ್ರಶ್ನೆಗಳಲ್ಲಿಯೂ ಸುಲಭ ಉತ್ತರಗಳೆ ಗೋಚರಿಸುತ್ತವೆ. ಮನಸ್ಸು ಸಕಾರಾತ್ಮಕತೆವಾಗಿ ಯೋಚಿಸುತ್ತದೆ.
ಶಾಂತಚಿತ್ತವಾದ ಮನಸ್ಸಿನಿಂದ ಹೊರಹೊಮ್ಮುವ ಪ್ರತಿ ಶಬ್ದ ಶಂಖನಾದದಂತೆ...ಲೇಖಕ ಭಾವಗಳು ಪ್ರತಿಧ್ವನಿಸುವಂತೆ ಮಾಡುತ್ತದೆ.
ಲೇಖಕನಿಗೆ ಅನುಭವೇ ಸಂಪತ್ತು ಆ ಸಂಪತ್ತನ್ನು ಪುಟಗಳಲ್ಲಿ ಇಳಿಸಿ ಕಳೆದು ಹೋದ ಸಮಯ ಮರೆತು ಹೋದ ಘಟನೆಗಳನ್ನು ಕೂಡ ಅಕ್ಷರದ ಮೂಲಕ ಜೀವಂತವಾಗಿರಿಸುವವನು ಲೇಖಕ
✍ ಅಂಜಲಿ ಶ್ರೀನಿವಾಸ