ಪ್ರೀತಿ, ಪ್ರೇಮದ ಸುಖ ಜೀವನ ಸಾಗಿಸುತ್ತಿರಲು

ಬಿತ್ತೊಂದು ಅಸೂಯೆಯ ನೆರಳು

ತನ್ನ ಸ್ವಾರ್ಥವ ಸಾಧಿಸಲು

ಬಲಿಯಾಯಿತು ಮುಗ್ಧ ಕುಟುಂಬವು


ಯಜಮಾನನು ನಿಷ್ಟೆಯಿಂದ ಪರವೂರಲಿ ಬೆವರು ಸುರಿಸುತ್ತಿರಲು

ಕನಸಲ್ಲೂ ನೆನೆಸದ ಸುದ್ದಿ ಕಿವಿಗೆ ಬೀಳಲು

ಇಡೀ ಕುಟುಂಬವೇ ರಕ್ತದ ಮಡುವಲಿ ಬಿದ್ದಿರಲು

ಕೇಳುವರಾರು ಮನೆಯೊಡೆಯನ ಕಣ್ಣೀರ ಅಳಲು? 


ಕರುಳ ಕುಡಿಯ ರಕ್ಷಿಸಲು ತಾಯಿಯ ಓಟ

ಅಂಗಳದಿ ಹಸುಗೂಸಿನ ದಿನನಿತ್ಯದಾಟ

ಎಲ್ಲರನ್ನೂ ಸೆರೆಯಾಗಿಸಿತು ಆ ರಾಕ್ಷಸ ನೋಟ

ಕ್ಷಣದಲಿ ಸ್ಮಶಾನವಾಯಿತು ಜಿಲ್ಲೆಯ ಭೂಪಟ


ಒಂದು ಜೀವನ ರಕ್ಷಿಸಲು ಅದೆಷ್ಟೊ ನೋವು

ಲೋಕವೇ ಬೆಚ್ಚಿ ಬೀಳಿಸುವ ಕಂಡು ಕೇಳರಿಯದ ಸಾವು

ಆದರೂ ಕರಗಲಿಲ್ಲ ಆ ಕಲ್ಲು  ಹ್ರದಯವು

ಮನುಷ್ಯ ಮನದಲಿ ಕವಿದಿತ್ತು ಸ್ವಾರ್ಥದ ಕತ್ತಲೆಯು


ಭಗವಂತ ಕರುಣದಿ ರಕ್ಷಿಸು ಈ ಜಗವನು

ಮಾನವ ಹ್ರದಯದಿ ಮೂಡಿಸು ಕರುಣೆಯನು

ಕಲ್ಮಶ, ದುರಾಲೋಚನೆ ಹೊಳೆಯುವ ಮೊದಲು

ನಿನ್ಯಯ ಪಾದಕೆ ಸೇರಿಸು ಇಂತಹ ಪಾಪಿಗಳನು. 


✍️ವಿಲ್ಲಿ ಅಲ್ಲಿಪಾದೆ