ಹೆಬ್ರಿ: ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಕೆ.ಸುಧಾಕರ್ ಬುಧವಾರ ಉಷಾ ಮೆಡಿಕಲ್ನಲ್ಲಿ ಅಳವಡಿಸಲಾದ ಬೇಸಿನ್ನಲ್ಲಿ ಸೋಪು ಹಾಕಿ ಕೈತೊಳೆಯುವ ಮೂಲಕ ಚಾಲನೆ ನೀಡಿದರು.
ಹೆಬ್ರಿ ಉಷಾ ಮೆಡಿಕಲ್ನಲ್ಲಿ ಕೊರೊನ ಜನಜಾಗೃತಿ ! ಸೋಪ್ ಬಳಸಿ ಕೈ ತೊಳೆಯುವ ವ್ಯವಸ್ಥೆ !
ಹೆಬ್ರಿ : ನಾಡಿನೆಲ್ಲೆಡೆ ಕೊರೊನ ಭೀತಿಯಿಂದ ಜನತೆ ಕಂಗಲಾಗಿದ್ದರೇ ಹೆಬ್ರಿ ಉಷಾ ಮೆಡಿಕಲ್ಸ್ ಮಾಲಕರಾದ ಸಮಾಜಸೇವಕ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಚ್.ದಿನಕರ ಪ್ರಭು ಕೊರೊನ ಬಗ್ಗೆ ಜಾಗೃತಿ ಮೂಡಿಸಲು ತನ್ನ ತಂದೆ ಎಚ್. ಶ್ಯಾಮ್ ಪ್ರಭು ಮತ್ತು ಕುಟುಂಬದ ಹೆಸರಿನಲ್ಲಿ ಸಮಗ್ರ ಮಾಹಿತಿಯ ಬ್ಯಾನರ್ ಅಳವಡಿಸಿ ಜಾಗೃತಿ ಮೂಡಿಸುತ್ತಿದ್ದಾರೆ. ಸದಾ ಹೊಸ ಯೋಚನೆ ಯೋಜನೆಯ ಮೂಲಕ ಸೇವೆಯಲ್ಲಿ ತೊಡಗಿಸಿಕೊಳ್ಳು ಯುವ ನಾಯಕ ದಿನಕರ ಪ್ರಭು ತನ್ನ ಬುಧವಾರ ಉಷಾ ಮೆಡಿಕಲ್ನಲ್ಲಿ ಅಳವಡಿಸಲಾದ ಬೇಸಿನ್ನಲ್ಲಿ ಸೋಪು ಹಾಕಿ ಕೈತೊಳೆಯಲು ವ್ಯವಸ್ಥೆಗೊಳಿಸಿದ್ದಾರೆ. ತನ್ನ ಉದ್ಯಮದಲ್ಲಿ ಈ ಹಿಂದೆ ಇದ್ದ ಟೆಲಿಫೋನ್ ಬೂತ್ ಅನ್ನು ಬೇಸಿನ್ ಅಳವಡಿಸಲು ಬಳಸಿದ್ದಾರೆ. ಮೂಲಕ ಚಾಲನೆ ನೀಡಿದರು. ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಕೆ.ಸುಧಾಕರ್ ಬೇಸಿನ್ನಲ್ಲಿ ಸೋಪು ಹಾಕಿ ಕೈತೊಳೆಯುವ ಮೂಲಕ ಚಾಲನೆ ನೀಡಿದರು.
ಯಾವೂದೇ ಫಲಾಪೇಕ್ಷೆಯಿಲ್ಲದೆ ಬಂದ ಬೆಲೆಗೆ ಮಾಸ್ಕ್ ಕೂಡ ಮರಾಟ ಮಾಡುತ್ತಿದ್ದಾರೆ. ಔಷಧ ಅಂಗಡಿ ದೀಪಾವಳಿ ಆಚರಣೆ, ಪ್ರತಿ ವರ್ಷ ಸೈನಿಕರ ಕಲ್ಯಾಣ ನಿಧಿಗೆ ಆರ್ಥಿಕ ನೆರವು, ಶಿಕ್ಷಣ ಆರೋಗ್ಯಕ್ಕೆ ನೆರವು, ಹೆಬ್ರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಜನಸಾಮಾನ್ಯರೂ ಭಾಗಿಯಾಗಲು ಅನಂತಶ್ರೀ ಯೋಜನೆ, ಹೆಬ್ರಾಯ್ ಸೈಕಲ್ ಯಾನ ತಂಡದ ಮೂಲಕ ಸ್ವಚ್ಚತಾ ಕಾರ್ಯ ಸಹಿತ ವಿವಿಧ ಜನಸೇವಾ ಕಾರ್ಯದ ಮೂಲಕ ದಿನಕರ ಪ್ರಭು ಮನೆಮಾತಾಗಿದ್ದಾರೆ. ಲಯನ್ಸ್ ಕ್ಲಬ್ ಜಿಲ್ಲಾ ಸಂಯೋಜಕ ಟಿ.ಜಿ.ಆಚಾರ್, ಹೆಬ್ರಿ ಲಯನ್ಸ್ ಕ್ಲಬ್ ಸಂಸ್ಥಾಪಕಾಧ್ಯಕ್ಷ ಎಚ್.ದಿನಕರ ಪ್ರಭು, ಪೂರ್ವಾಧ್ಯಕ್ಷ ಎಚ್.ರಮೇಶ ಆಚಾರ್, ದೀಪ್ತಿ ದಿನಕರ ಪ್ರಭು, ಸುಶ್ಯಾಮ್ ಪ್ರಭು, ನರ್ಮದಾ ಪ್ರಭು, ನಿವೃತ್ತ ಬ್ಯಾಂಕ್ ಅಧಿಕಾರಿ ಗೋಪಾಲ ಶೆಟ್ಟಿ ಇದ್ದರು.
ಸದಾ ಹೊಸತನ, ಹೊಸ ಯೋಜನೆ ಯೋಚನೆಯ ಮೂಲಕ ನಿರಂತರವಾಗಿ ಸಮಾಜಮುಖಿ ಕಾರ್ಯದಲ್ಲಿ ಸದ್ದಿಲ್ಲದೆ ತೊಡಗುವುದು ದಿನಕರ ಪ್ರಭು ಅವರಲ್ಲಿ ರಕ್ತಗತವಾಗಿದೆ.
-ಹೆಬ್ರಿ ಟಿ.ಜಿ.ಆಚಾರ್. ಲಯನ್ಸ್ ಜಿಲ್ಲಾ ಸಂಯೋಜಕ.
ಸಾಮಾಜಿಕ ಹೊಣೆಗಾರಿಕೆ : ನನ್ನ ಉದ್ದೇಶ.
ನಾಡಿನೆಲ್ಲೆಡೆ ರೋಗದ ಭೀತಿಯಿಂದಾಗಿ ಜನತೆ ಜೀವಭಯದ ಆತಂಕ ಎದುರಿಸುತ್ತಿದ್ದಾರೆ. ಆ ಸಮಯದಲ್ಲಿ ಎಲ್ಲರಿಗೂ ಸಾಮಾಜಿಕ ಹೊಣೆಗಾರಿಕೆ ಇರಬೇಕು. ಅದನ್ನು ನಾನು ಮಾಡಿದ್ದೇನೆ ಅಷ್ಟೆ.
ಎಚ್.ದಿನಕರ ಪ್ರಭು.