ಮಂಗಳೂರು:- ಮೇ 10 ರಂದು ಸುಬ್ರಹ್ಮಣ್ಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಸುಮಾರು 30 ಗೃಹರಕ್ಷಕರುಗಳಿಗೆ ದಿನಸಿ ಕಿಟ್ಗಳನ್ನು ಶಾಸಕ ಎಸ್. ಅಂಗಾರ ವಿತರಿಸಿದರು. ಈ ಸಂದರ್ಭ ಜಿಲ್ಲಾ ಸಮಾದೇಷ್ಟ ಡಾ|| ಮುರಲೀ ಮೋಹನ ಚೂಂತಾರು, ಸುಬ್ರಹ್ಮಣ್ಯ ಘಟಕಾಧಿಕಾರಿ ನಾರಾಯಣ, ಬೆಳ್ಳಾರೆ ಪ್ರಭಾರ ಘಟಕಾಧಿಕಾರಿ ವಸಂತ ಕುಮಾರ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಪ್ರಶಾಂತ್ ಮಾಣಿಲ ಹಾಗೂ ಸುಬ್ರಹಣ್ಯ ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.
