ಮಂಗಳೂರು (ಡಿಸೆಂಬರ್ 5):-  ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020 ರ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಅಕ್ರಮ ಮದ್ಯ/ ಬೀರ್ ತಯಾರಿಕೆ/ ದಾಸ್ತಾನು/ ಸಾಗಾಣಿಕೆ ಬಗ್ಗೆ ಸಾರ್ವಜನಿಕರಿಂದ ನೀಡಲಾಗುವ ದೂರುಗಳನ್ನು ಸ್ವೀಕರಿಸಲು ಹಾಗೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಯಲು ಸಹಕಾರಿ ಆಗುವಂತೆ ನೋಡಿಕೊಳ್ಳಲು ಅಬಕಾರಿ ಇಲಾಖಾ ವತಿಯಿಂದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ/ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್‍ಗಳನ್ನು ತೆರೆಯಲಾಗಿದೆ.

        ಮಂಗಳೂರು ತಾಲೂಕು ಅಬಕಾರಿ ಉಪ ಆಯುಕ್ತರ ಕಚೇರಿ, ಅಬಕಾರಿ ಭವನ, ಮೇರಿಹಿಲ್, ದೂ.ಸಂಖ್ಯೆ: 0824-2213872,   ಬಂಟ್ವಾಳ ತಾಲೂಕು ಅಬಕಾರಿ ನಿರೀಕ್ಷಕರ ಕಚೇರಿ, ಬಂಟ್ವಾಳ ವಲಯ, ದೂ.ಸಂಖ್ಯೆ: 08255-232726, ಪುತ್ತೂರು ತಾಲೂಕು ಅಬಕಾರಿ ನಿರೀಕ್ಷಕರ ಕಚೇರಿ, ಪುತ್ತೂರು ವಲಯ, ದೂ.ಸಂಖ್ಯೆ: 08251-298481, ಬೆಳ್ತಂಗಡಿ ತಾಲೂಕು ಅಬಕಾರಿ ನಿರೀಕ್ಷಕರ ಕಚೇರಿ, ದೂ.ಸಂಖ್ಯೆ: 08256-298757, ಸುಳ್ಯ ತಾಲೂಕು ಅಬಕಾರಿ ನಿರೀಕ್ಷಕರ ಕಚೇರಿ, ದೂ.ಸಂಖ್ಯೆ:  08257-231309, ಅಬಕಾರಿ ಆಯುಕ್ತರ ಕಚೇರಿ ಬೆಂಗಳೂರು ಟೋಲ್ ಪ್ರೀ ಸಂಖ್ಯೆ: 18004252550     .

    ಕಂಟ್ರೋಲ್ ರೂಮ್‍ಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಅಬಕಾರಿ ಅಕ್ರಮಗಳ ಬಗ್ಗೆ ಮಾಹಿತಿಯನ್ನು  ಕಂಟ್ರೋಲ್ ರೂಮ್‍ಗಳ ದೂರವಾಣಿ ಸಂಖ್ಯೆಗೆ ನೀಡಬಹುದಾಗಿರುತ್ತದೆ ಎಂದು ಜಿಲ್ಲೆಯ  ಡೆಪ್ಯುಟಿ ಕಮೀಷನರ್ ಆಫ್ ಎಕ್ಸೈಜ್ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.