ಮಂಗಳೂರು:- ನಾಡಿನ ಸಾಕ್ಷಿಪ್ರಜ್ಞೆ, ಸ್ವಾತಂತ್ರ್ಯ ಸೇನಾನಿ, ಜನಪರ ಹೋರಾಟಗಾರ 103 ವರ್ಷದ ಚಿರಯುವಕ ಹೆಚ್.ಎಸ್. ದೊರೆಸ್ವಾಮಿಯವರ ಬದುಕು ಮತ್ತು ಸಂಘರ್ಷದ ಕುರಿತಾದ ಪೆಡಸ್ಟೆರಿಯನ್ ಪಿಚ್ಚರ್ಸ್ ನ ಮಿತ್ರ ದೀಪು ನಿರ್ಮಾಣದ ಸಾಕ್ಷ್ಯಚಿತ್ರ 'ಮಹಾನ್ ತಾತ' ಅಕ್ಟೋಬರ್ 2 ರಂದು ರಾಜ್ಯದ ಹಲವೆಡೆ ಪ್ರದರ್ಶನಗೊಳ್ಳಲಿದೆ.
ಮಂಗಳೂರಿನಲ್ಲಿ ದ.ಕ.ಜಿಲ್ಲಾ ಸಹಮತ ವೇದಿಕೆಯ ಆಶ್ರಯದಲ್ಲಿ ಸಂಜೆ 4.00ಕ್ಕೆ ನಗರದ ಸ್ಟೇಟ್ ಬ್ಯಾಂಕ್ ಬಳಿಯ ಅಲ್ ರಹಬಾ ಪ್ಲಾಝಾದ 2ನೇ ಮಹಡಿಯಲ್ಲಿರುವ ದಿ ಕ್ಯಾಪಸ್ ಕರಿಯರ್ ಅಕಾಡೆಮಿಯ ಸಭಾಂಗಣದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ ಎಂದು ಸಹಮತ ವೇದಿಕೆ, ದ.ಕ.ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಉಮರ್ ಯು.ಹೆಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.