ಹಾಲು ಹಾಲಾಹಲ ಆಗುವುದು
ಅತೀಯಾದಾಗಲ್ಲವೋ....
ಇತಿ-ಮಿತಿಯಿಲ್ಲದಿರುವ
ಸಂಗತಿಯೇ ಅತಿಯಲ್ಲವೋ....
ಅಳತೆ ಮೀರಿದರೆ ಖಾಯಂ
ನಿನ್ನ ತಿಥಿಯಲ್ಲವೋ....
ಜೀವನದ ನೈಜತೆ ಸಾಕ್ಷಾತ್ಕಾರವಾದಾಗ,
ಹುದುಗಿದ್ದ ಮೌನ ಮಾತಾದಾಗ...
ಭಾವನೆಯ ಕಡಲು ಕಟ್ಟೆಯೊಡೆದಾಗ...
ತಂತನದ ಅರಿವು ತನಗಾದಾಗ....
-By ಮಾಗಿದ ಮನಸ್ಸು