ವಿಧಾನ ಸಭೆಯಲ್ಲಿ ಮಾಜೀ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯವರು ಹಲಾಲ್ ಮಾಂಸದ ತರಲೆ ಮಾಡಿದವರು ಯಾರು ಎಂದು ಪ್ರಶ್ನಿಸಿದಾಗ ಮಂತ್ರಿ ಅಶೋಕ ಅವರು ಅವರವರ ಮಾಂಸ ಖರೀದಿಗೆ ಅವರವರು ಸ್ವತಂತ್ರರು ಎಂದರು.

ಹಲಾಲ್ ಮಾಂಸ ಮುಸ್ಲಿಮರ ಪದ್ಧತಿ. ನಿಮ್ಮ ಮೇಲೆ ಅವರು ಅದನ್ನು ಹೇರಿಲ್ಲ. ಮಾಂಸ ಕೊಳ್ಳುವವರು ಅವರಿಗೆ ಬೇಕಾದ್ದನ್ನು ಕೊಂಡುಕೊಳ್ಳುತ್ತಾರೆ. ಯಾವ ತರಲೆ ಈಗ ಈ ಹಲಾಲ್ ವಿಷಯ ಎತ್ತಿ ಗಲಾಟೆ ಬೀಜ ಹಾಕಿದವನು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಹಲಾಲ್ ಮೂಲಕ ನೆತ್ತರು ತೆಗೆಯುವುದು ವೈಜ್ಞಾನಿಕ. ಬೇಕಾದವರು ಬಳಸುತ್ತಾರೆ. ಗಲಭೆಯ ಫರ್ಮಾನು ಹೊರಡಿಸುವುದೇಕೆ ಎಂದು ಮಾಜೀ ಸಭಾಪತಿ ರಮೇಶ್ ಕುಮಾರ್ ಕೇಳಿದರು.