ಮಂಗಳೂರು, ಮಾರ್ಚ್ 03: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅರಿವುಭರಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಮಾನ್ಯತೆಗೆ ಒಳಗೊಡಿಸುವ ಕಜ್ಜ ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಹಾಲ್ನಲ್ಲಿ ನಡೆಯಿತು.
ಅತಿ ವಂದನೀಯ ಮಂಗಳೂರು ಧರ್ಮ ಪ್ರಾಂತ್ಯದ ಬಿಶಪ್ ಪೀಟರ್ ಪಾವುಲ್ ಸಲ್ದಾನಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಹಿರಿಯರ ತ್ಯಾಗದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ಸಂಸ್ಥೆಗಳ ಸಾಧನೆ ದೊಡ್ಡದು. ಅದೇ ರೀತಿ ಈಗಿನ ಯುವ ಜನಾಂಗ ಈಗಿನ ಮತ್ತು ಮುಂದಿನ ಮಂದಿ ಆಗಿದ್ದು, ಅವರ ಸಾಧನೆ ಗುರುತಿಸುವುದು ಮುಖ್ಯ. ನ್ಯಾಯಾಧೀಶೆಯಾಗಿ ಆಯ್ಕೆಯಾದ ಜಾಯ್ಲಿನ್ ಮೆಂಡೋನ್ಸಾ ಅವರ ಸಾಧನೆ ಹಿರಿದು. ನಾವು ಲೋಕ ಮಾನವರಾದರೂ ಮೊದಲು ಭಾರತೀಯರು ಎಂದು ಬಿಶಪ್ ಅವರು ಹೇಳಿದರು.
ಕಾರ್ಯದರ್ಶಿ ಫಾ. ವಾಲ್ಟರ್ ಡಿಮೆಲ್ಲೋ ಎಲ್ಲರನ್ನೂ ಸ್ವಾಗತಿಸಿದರು.
ಹೈಕೋರ್ಟ್ ಸಿವಿಲ್ ನ್ಯಾಯಾಧೀಶೆ ಆಗಿ ಆಯ್ಕೆಯಾಗಿ ಕಾರ್ಯಾರಂಭ ಮಾಡಿರುವ ಜಾಯ್ಲಿನ್ ಮೆಂಡೋನ್ಸಾ ಅವರನ್ನು ಸನ್ಮಾನಿಸಲಾಯಿತು.
ಅವರು ಮಾತನಾಡಿ ತಾನು ಭಾರತೀಯ ನೌಕಾಪಡೆಯಲ್ಲಿ ದುಡಿದುದನ್ನು ನೆನಪಿಸಿಕೊಂಡರು. ತಂದೆಯನ್ನು ಕಳೆದುಕೊಂಡು ತಾಯಿಯ ದುಡಿಮೆಯಲ್ಲಿ ಬೆಳೆದ ನಾನು ಪ್ರಯತ್ನದ ಮಗು. ಎಲ್ಲ ವಿದ್ಯಾರ್ಥಿಗಳು ಪ್ರಯತ್ನ ಮಾಡುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದರು.
ಕರ್ಯಕ್ರಮದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ 182 ವಿದ್ಯರ್ಥಿಗಳನ್ನು ಗೌರವಿಸಲಾಯಿತು.
ಇನ್ವೆಸ್ಟ್ಮೆಂಟ್ ಅಡ್ವೈಜರ್ ಜೆರಾಲ್ಡ್ ಕುಲಾಸೊ ಮತ್ತು ಕೆಥೋಲಿಕ್ ಸಭಾದ ಆಧ್ಯಾತ್ಮಿಕ ನರ್ದೇಶಕ ವಂ| ಜೆ.ಬಿ. ಸಲ್ಡಾನ್ಹಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಫುಡಾರ್ ಪ್ರತಿಷ್ಠಾನದ ಅಧ್ಯಕ್ಷ ಜೆರಾಲ್ಡ್ ಡಿಕೋಸ್ತಾ, ಕೆಥೋಲಿಕ್ ಸಭಾದ ಅಧ್ಯಕ್ಷರಾದ ಸ್ಟ್ಯಾನಿ ಲೋಬೊ (ಮಂಗಳೂರು) ಮತ್ತು ಮೇರಿ ಡಿಸೋಜಾ (ಉಡುಪಿ), ಎಂಸಿಸಿ ಬ್ಯಾಂಕ್ನ ಅಧ್ಯಕ್ಷ ಅನಿಲ್ ಲೋಬೊ ಫರ್ಮಾಯ್, ಫುಡಾರ್ ಪ್ರತಿಷ್ಠಾನದ ಎಲ್ರೋಯ್ ಕಿರಣ್ ಕ್ರಾಸ್ಟೋ, ನೈಜಿಲ್ ಪಿರೇರಾ, ಎಲ್. ಜೆ. ಫರ್ನಾಂಡಿಸ್, ಐರಿನ್ ಪಿರೇರಾ ಮತ್ತಿತರರು ವೇದಿಕೆಯಲ್ಲಿದ್ದರು. ಜಾನ್ ಬಾಪ್ಟಿಸ್ಟ್ ಅವರು ಸಂದೇಶ ನೀಡಿದರು. ಜೆರಾಲ್ಡ್ ಅಧ್ಯಕ್ಷತೆ ವಹಿಸಿದ್ದರು. ಸ್ಟ್ಯಾನಿ ಲೋಬೋ ಮೊದಲಾದವರು ಉಪಸ್ಥಿತರಿದ್ದರು.