ಪ್ರತಿ ನಿತ್ಯ ಅಡಿಗೆ ಅನಿಲ, ಪೆಟ್ರೋಲಿಯಂ, ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ಖಂಡಿಸಿ ಸಿಪಿಎಂ ಪಕ್ಷದವರು ಮಂಗಳೂರಿನ ಗಡಿಯಾರ ಗೋಪುರದ ಬಳಿ ಪ್ರತಿಭಟನೆ ನಡೆಸಿದರು.

ನಾಯಕರಾದ ಸುನೀಲ್ ಕುಮಾರ್ ಬಜಾಲ್ ಮೊದಲಾದವರು ಮಾತನಾಡಿದರು.

ಸಿಪಿಎಂ ಜಿಲ್ಲಾ ಮುಖ್ಯಸ್ಥ ಯಾದವ ಶೆಟ್ಟಿ ಅವರು ಮಾತನಾಡಿ ಜನರ ಬದುಕಿಗೆ ಕೊಳ್ಳಿ ಇಡುವಂತೆ ಮೋದಿ ಸರಕಾರ ಬೆಲೆ ಏರಿಸಿದೆ. ನಾರ್ವೆಡ್ ಆದಾಯದ 0.9% ಪೆಟ್ರೋಲಿಗೆ ವೆಚ್ಚವಾದರೆ ಭಾರತದ ತಲಾ 13% ಪೆಟ್ರೋಲಿಯಂಗೆ ವೆಚ್ಚವಾಗುತ್ತಿದೆ. ಹಿಂದಿನ ಸರಕಾರದ ಬಗೆಗೆ ಸುಳ್ಳು ಹೇಳುತ್ತ ಮೋದಿ ಸರಕಾರವು ಜನರಲ್ಲಿ ಸುಳ್ಳು ಹೇಳುತ್ತ ಕೋಟಿಗಟ್ಟಲೆ‌ ಹಣ ಒಟ್ಟುಮಾಡಿದೆ. ಆದರೆ ಅದನ್ನು ಜನರ ಕಲ್ಯಾಣಕ್ಕೆ ಉಪಯೋಗಿಸದೆ ಕಾರ್ಪೊರೇಟ್ ಪರ ಬಳಸುತ್ರಿದೆ ಎಂದು ಅವರು ಆರೋಪಿಸಿದರು.

ಇಮ್ತಿಯಾಜ್, ಬಾಲಕೃಷ್ಣ ಶೆಟ್ಟಿ, ವಾಸುದೇವ ಉಚ್ಚಿಲ್, ಜಯಂತಿ ಶೆಟ್ಟಿ, ಪದ್ಮಾವತಿ ಶೆಟ್ಟಿ ಭಾರತಿ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು. ಭಾರತಿ ಬೋಳಾರ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ತೀವ್ರ ಘೋಷಣೆ ಕೂಗಿದರು.