ಮೋಡದ ಮರೆಯಿಂದ
ರಾಯರು ಇಣುಕಿದರು
ಈದ್ ಮಾಡಿದರು.
ಉಗುಳನೂ ನುಂಗದ
ನಿಷ್ಠಾವಂತರು
ಕಂಡು ಮುಗುಳ್ನಕ್ಕರು.
ತನ್ನಯ ಒಡಲಿನಿಂದ
ಜಕಾತ್ ನೀಡುವವರು
ಭೇಷ್ ಅಂದರು.
ಅಲ್ಲಾಹ್ ನ ಮುಂದೆ
ಬನ್ನೀ ಎಲ್ಲಾರೂ
ಆಲಂಗಿಸೋಣ ಎಂದರು.
ಮೋಡವು ಸರಿದಿದೆ
ನೆರೆ ಮನೆ ಬೆಳಕಿದೆ
ಕಿಟಕಿಯು ತೆರೆದಿದೆ ಎಂದರು.
ರೇಮಂಡ್ ಡಿಕೂನ