ಕಾರ್ಕಳ: ನ್ಯಾಯವಾದಿ ಕೆ. ಜಗನ್ನಾಥ ಕುಡ್ವ (89 ವರ್ಷ) ಅವರು ಫೆ. 22ರಂದು ನಿಧನ ಹೊಂದಿದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾಗಿ, ಶ್ರೀ ವೆಂಕಟರಮಣ ದೇವಳದ ಮ್ಯಾನೇಜಿಂಗ್ ಟ್ರಸ್ಟಿಯಾಗಿ 6 ವರ್ಷಗಳ ಕಾಲ ಸೇವೆ, ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ಸಂಚಾಲಕರಾಗಿ, ಶ್ರೀ ಭುವನೇಂದ್ರ ಕಾಲೇಜಿನ ಅತಿಥಿ ಉಪನ್ಯಾಸಕರಾಗಿ, ಕಾರ್ಕಳ ಟೌನ್ ಬ್ಯಾಂಕಿನ ಅಧ್ಯಕ್ಷರಾಗಿ 2 ಅವಧಿಗೆ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.