ಮಂಗಳೂರು, ಸೆ 15: ಬುಧವಾರ ಸೆ 14, 2022 ರಂದು ರಾತ್ರಿ 9.30 ಗಂಟೆ ಸುಮಾರಿಗೆ ಮಂಗಳೂರು ನಗರದ ಕಾರ್ ಸ್ಟ್ರೀಟ್ ಎಂಬಲ್ಲಿ ಜೈಜುನ್ನಿಸ ಎಂಬವರು ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಸುಮಾರು 90,000/- ರೂ ಮೌಲ್ಯದ ಚಿನ್ನಾಭರಣ ಹಾಗೂ 15,000/- ನಗದು ಹಾಗೂ ಇತರ ದಾಖಲಾತಿಗಳನ್ನು ಹೊಂದಿದ್ದ ಬ್ಯಾಗನ್ನು ಆಟೋ ರಿಕ್ಷಾ KA19AA6152 ಆಟೋ ಚಾಲಕರಾದ ರವಿ ಗಟ್ಟಿ ಎಂಬವರು ಬಂದರು ಠಾಣಾ ಪೊಲೀಸ್ ರ ಸಹಯೋಗದೊಂದಿಗೆ ಬ್ಯಾಗ್ ನ್ನು ಮಾಲಕರಿಗೆ ಹಸ್ತಾಂತರಿಸಲಾಯಿತು.