ವರದಿ ರಾಯಿ ರಾಜಕುಮಾರ ಮೂಡುಬಿದಿರೆ 


ಕಿನ್ನಿಗೋಳಿ ಪಟ್ಟಣ ಪಂಚಾಯತ್ ವತಿಯಿಂದ 24- 25 ನೇ ಸಾಲಿನ ಎಸ್ ಎಫ್ ಸಿ ಯೋಜನೆ ಅಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸ್ವಉದ್ಯೋಗಕ್ಕೆ ಅನುಕೂಲದ ಸಹಾಯವನ್ನು ವಿತರಿಸಲಾಯಿತು. ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಟೈಲರಿಂಗ್ ಮಷೀನ್ ಗಳನ್ನು ಮಹಿಳೆಯರಿಗೆ ವಿತರಿಸಿದರು. 

23 -24ನೇ ಸಾಲಿನ 15ನೇ ಹಣಕಾಸು ಯೋಜನೆಯ ಅಡಿಯಲ್ಲಿ ಜೆಸಿಬಿ, ಆಟೋ ಟಿಪ್ಪರ್ ಗಳಿಗೆ ಸಹಾಯಧನವನ್ನು ಒದಗಿಸಿ ಉತ್ತಮ ವಾಹನಗಳನ್ನು ವಿತರಿಸಿದರು. ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅಂತರ್ಗತ ಘನ ತ್ಯಾಜ್ಯ ವಿಲೇವಾರಿಗೆ ಡಸ್ಟ್ ಬಿನ್ ಗಳನ್ನು ಕೂಡ ಸಾರ್ವಜನಿಕರಿಗೆ, ಸಂಘ-ಸಂಸ್ಥೆಗಳಿಗೆ ಶಾಸಕರು ವಿತರಿಸಿದರು.