ಬೈಕ್ ಅಪಘಾತದಲ್ಲಿ ಮಿದುಳಿಗೆ ಗಾಯಗೊಂಡು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ನಟ ಸಂಚಾರಿ ವಿಜಯ್ ಸೋಮವಾರ ಮಧ್ಯಾಹ್ನದ ಹೊತ್ತಿಗೆ ನಿಧನರಾದರು.

ಮಿದುಳಿನಲ್ಲಿ ‌ರಕ್ತ ಹೆಪ್ಪುಗಟ್ಟಿದ ಸ್ಥಿತಿ ‌ಬದಲಿಸಲು ವೈದ್ಯರು ನಡೆಸಿದ ಶಸ್ತ್ರ ಚಿಕಿತ್ಸೆ ಫಲ ನೀಡಲಿಲ್ಲ. ಅಪಘಾತ ಆದಾಗಿನಿಂದ ಕೋಮಾದಲ್ಲಿದ್ದ ಅವರು ಮೇಲೇಳಲೇ ಇಲ್ಲ. ಮಿದುಳು ಸತ್ತು ಒಂದು ದಿನದ ಬಳಿಕ ಅವರೂ ಇಲ್ಲವಾದರು.

ಮುಖ್ಯಮಂತ್ರಿಗಳಿಂದ ಹಿಡಿದು ಸಾಕಷ್ಟು ಗಣ್ಯರು ವಿಜಯ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.