ಬರೇ ಎರಡು ಕೋಟಿ ರೂಪಾಯಿ ಬಾಳುವ ಭೂಮಿಯನ್ನು ರಾಮ ಮಂದಿರ ತೀರ್ಥ ಟ್ರಸ್ಟ್ನವರು ರೂಪಾಯಿ 18.5 ಕೋಟಿಗೆ ಖರೀದಿ ಮಾಡಿರುವುದರ ಹಿಂದೆ ಭಾರೀ ಹಣ ವರ್ಗಾವಣೆ ವಂಚನೆ ಇರುವುದಾಗಿ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಪವನ್ ಪಾಂಡೆ ಆರೋಪಿಸಿದ್ದಾರೆ.
ಇದರಲ್ಲಿ ಹವಾಲಾ ಒಳ ದಂಧೆ ನಡೆದಿದೆ. ಸಾವಿರ ಪಟ್ಟು ಹೆಚ್ಚು ಹಣ ನೀಡುವುದೆಂದರೆ ಏನು ಸುಮ್ಮನೆಯೇ? ಈ ಮಹಾ ವಂಚನೆಯ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಅವರು ಒತ್ತಾಯಿಸಿದ್ದಾರೆ. ಇದರಲ್ಲಿ ಹುರುಳಿಲ್ಲ ಎಂಬ ಮಾಮೂಲು ಉತ್ತರವನ್ನು ಟ್ರಸ್ಟ್ನ ಚಂಪತ್ ರಾಯ್ ನೀಡಿದ್ದಾರೆ.