ಮುಂಬಯಿ: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದು ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬಯಿ ಮಹಾನಗರದಲ್ಲಿ ಕಲೆ ಮತ್ತು ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಮಹತ್ತರವಾದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹಲವಾರು ಕೊಡುಗೈ ದಾನಿಗಳ ಸಹಕಾರದಿಂದ ಈಗಾಗಲೇ ಪರಿಷತ್ತು ವತಿಯಿಂದ ಮಹಾರಾಷ್ಟ್ರದಲ್ಲಿ ಕಲಾಸೇವೆ ಗೈದಿರುವ ಗೈಯುತ್ತಿರುವ ಹಿರಿಕಿರಿಯ ಕನ್ನಡಿಗ ಕಲಾವಿದರ, ಕಲಾ ಸಂಘಟಕರ, ಕಲಾ ಪ್ರೋತ್ಸಾಹ ಕರ ಮಾಹಿತಿ ಹೊಂದಿರುವ ಸಮಗ್ರ ಕೈಪಿಡಿ ಪ್ರಕಟನೆ ಗೊಂಡಿದೆ ಮಾತ್ರವಲ್ಲದೆ ಪರಿಷತ್ತು ಸ್ವಂತ ಕಚೇರಿಯನ್ನು ಹೊಂದಿರುವುದು ಅಭಿನಂದನೀಯ. 

ಪರಿಷತ್ತುವಿನ ಪ್ರತಿಯೊಂದು ಕಾರ್ಯಕಲಾಪಗಳಿಗೆ ಸದಾ ಬೆನ್ನು ತಟ್ಟುತ್ತಾ ಪ್ರತ್ಯೇಕ ಹಾಗೂ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಾ, ಸಹಕರಿಸುತ್ತಾ ಬಂದಂತಹ ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್ ಪ್ರಧಾನ ಅರ್ಚಕರು ಶ್ರೀ ಗಾಂವ್ ದೇವಿ ಅಂಬಿಕಾ ಶ್ರೀ ಆಧಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನ ವಿದ್ಯಾವಿಹಾರ್ ಇವರನ್ನು ಪರಿಷತ್ತುವಿನ ಅಧ್ಯಕ್ಷರು ಡಾ| ಸುರೇಂದ್ರ ಕುಮಾರ್ ಹೆಗ್ಡೆ ಹಾಗೂ ಹಿರಿಯ ಸದಸ್ಯರು ಸಲಹೆಗಾರಾದ ಕೆ. ಕೆ. ಶೆಟ್ಟಿಯವರು ಭೇಟಿ ನೀಡಿ ಶ್ರದ್ಧಾ ಪೂರ್ವಕವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಅಂತೆಯೇ ಸಮಾಜ ಸೇವಕ ಅಧ್ಯಕ್ಷರು ವಿಶ್ವ ದೇವಾಡಿಗ ಮಹಾಮಂಡಲ ಧರ್ಮಪಾಲ ದೇವಾಡಿಗರನ್ನು ಪರಿಷತ್ತವಿನ ಅಧ್ಯಕ್ಷರು ಡಾ|ಸುರೇಂದ್ರ ಕುಮಾರ್ ಹೆಗ್ಡೆ ಸಕ್ರೀಯ ಕಾರ್ಯಕರ್ತರಾದ ಪದ್ಮನಾಭ ಸಸಿಹಿತ್ಲು, ಎನ್. ಪ್ರಥ್ವಿರಾಜ್ ಮುಂಡ್ಕೂರು, ಲಯನ್ ಮುರಳಿಧರ್ ಹೆಗ್ಡೆ ಭೇಟಿ ನೀಡಿ ಆತ್ಮೀಯವಾಗಿ ಗೌರವಿಸಿದ ಶುಭ ಸಂದರ್ಭ.