ಎಂಬತ್ತು ವರುಷಗಳಷ್ಟು ಹಳೆಯ ಕೂಳೂರು ಕಮಾನು ಸೇತುವೆ ಗಟ್ಟಿ ಇದ್ದರೂ ಅದರ ಮೇಲಿನ ಮೂಲ ರಸ್ತೆ ನಾಶವಾಗಿ ವಾಹನ ಸವಾರರ ಪರದಾಟ ದಶಕದ ಕತೆಯಾಗಿದೆ.
ಹೆದ್ದಾರಿಯವರು ಮತ್ತು ಪಾಲಿಕೆ ನಿರ್ವಹಣೆಯಲ್ಲಿ ದಶಕದ ಹಿಂದಿನವರೆಗೆ ಈ ಕಮಾನು ಸೇತುವೆಯು ಸಾಮಾನ್ಯ ರಿಪೇರಿಯ ಬಳಿಕ ಕಮಾನ್ ಸವಾರ ಎನ್ನುತ್ತಿತ್ತು. ಆದರೆ ಈಗ ಹಾಕುವ ತೇಪೆಯೇ ಗುಣಮಟ್ಟದ್ದಲ್ಲ ಎನ್ನುವುದು ವರುಷವೂ ಅದೇ ಕತೆ ಎಂಬುದರಿಂದ ಸ್ಪಷ್ಟ.
ಆರು ತಿಂಗಳ ಹಿಂದೆ ಸೇತುವೆಗೆ ಸುಣ್ಣ ಬಣ್ಣ ಬಳಿದು, ಮೇಲಿನ ಗುಂಡಿಗಳನ್ನು ಮುಚ್ಚಲಾಗಿತ್ತು. ಆದರೆ ಮುಂಗಾರು ಮುನ್ ಮಳೆಗೇ ಅದೆಲ್ಲ ಕಿತ್ತು ಹೋಗಿ ಸೇತುವೆ ಮೇಲೆಲ್ಲ ಹಲವಾರು ಬಕೆಟ್ಗಳಲ್ಲಿ ನೀರು ತುಂಬಿಸಿಟ್ಟಂತೆ ಕಾಣುತ್ತಿತ್ತು.
ದಿಢೀರನೆ ಬೆಳಿಗ್ಗೆ ಕಮಾನು ಸೇತುವೆಗೆ ಕಮಾನು ಡಬ್ಬಿಯೆಲ್ಲ ಅಡ್ಡ ಇಟ್ಟು ರಿಪೇರಿ. ವಾಹನಗಳು ಒಂದು ಕಿಮೀ ಉದ್ದಕ್ಕೆ ಮಳೆಯಲ್ಲಿ ನನೆಯುತ್ತ ನಿಧಾನವೇ ಪ್ರಧಾನಕ್ಕೆ ಬಯ್ದವು. ರಾತ್ರಿಯಾದರೂ ತೇಪೆ ಹಾಕಬಹುದಿತ್ತು. ಆದರೆ ಲಾಕ್ಡೌನ್ ಹೆದ್ದಾರಿ ಸವಾರರಿಗೆ ಬ್ರೇಕ್ ಟೈಮ್ ಅಲ್ಲ. ಅಂತೂ ನಮ್ಮ ಆಳುವವರ ಮನಸ್ಸಿಗೆ ತೇಪೆ ಹಾಕದಿದ್ದರೆ ಇವೆಲ್ಲ ಎಂದಿಗೂ ಸಾಪ್ ಆಗುವುದಿಲ್ಲ.