ಜೂನ್ 16ರವರೆಗೆ ಕೊಡಸುರಿ ಮಳೆ ಬರಲಿರುವುದರಿಂದ ಕರ್ನಾಟಕದಲ್ಲಿ ಆರೇಂಜ್ ಮತ್ತು ಯೆಲ್ಲೋ ಅಲರ್ಟ್ ಅಧಿಕರಿಸಿ ವಿಸ್ತರಿಸಲಾಗಿದೆ.
ಮೊನ್ನೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಘೋಷಿಸಿದ್ದ ಕಿತ್ತಳೆ ಹುಶಾರ್ ಜಾಗರೂಕತೆಯನ್ನು ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ. ಭಾರಿ ಹನಿ ಕಡಿಯದ ಮಳೆ ಹಲವು ಕಡೆ ಜಡಿದಿದೆ.
ನಿನ್ನೆ ಆಗುಂಬೆಯಲ್ಲಿ 18 ಸೆಂಟಿಮೀಟರ್, ಉ. ಕ.ದ ಮಂಕಿಯಲ್ಲಿ 16 ಸೆಂಟಿಮೀಟರ್, ಗೋಕರ್ಣದಲ್ಲಿ 12 ಸೆಂಟಿಮೀಟರ್ ಮಳೆಯಾಗಿದೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ವಿಜಯಪುರ ಜಿಲ್ಲೆಗಳಲ್ಲಿಯೂ ಮಳೆ ಸುರಿಯುವುದರಿಂದ ಆ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.