ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಬಂಟವಾಳದ ಬಂಟರ ಸಂಘದ ವಿಂಶತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಬಂಟರ ಮಹಿಳಾ ಘಟಕದ ಸದಸ್ಯರು ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.
ಮೇ 25 ರಂದು ಬಂಟವಾಳದ ಬಂಟರ ಭವನದಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 10 ತಂಡಗಳು ಭಾಗವಹಿಸಿದ್ದು, ಮೂಡಬಿದ್ರೆಯ ಬಂಟರ ಸಂಘಕ್ಕೆ ಪ್ರಥಮ ಬಹುಮಾನ ಲಭಿಸಿರುತ್ತದೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಶೆಟ್ಟಿ ರಂಗೋಲಿ ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ , ಖ್ಯಾತ ವಕೀಲರಾದ ಅಶ್ವನಿ ಕುಮಾರ್ ರೈ, ಉದ್ಯಮಿಗಳಾದ ಎಂ ಸಿ ಆರ್ ಶೆಟ್ಟಿ, ದಂತ ವೈದ್ಯರಾದ ಡಾಕ್ಟರ್ ರಾಜ ಮೋಹನ್ ಶೆಟ್ಟಿ, ಶ್ರೀ ಸುಧಾಕರ್ ಶೆಟ್ಟಿ ಸುಗ್ಗಿ, ಹರ್ಷ ಮೇಲಾಂಟ, ಪ್ರಸನ್ನ ಶಂಕರ್ ಶೆಟ್ಟಿ ಹುಬ್ಬಳ್ಳಿ ಹಾಗೂ ಬಂಟವಾಳ ಬಂಟರ ಸಂಘದ ಪದಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ವಿವಿದ ಬಂಟರ ಸಂಘದ ಅಧ್ಯಕ್ಷರುಗಳು ಉಪಸ್ಥಿತರಿದ್ದು. ಬಹುಮಾನವನ್ನು ಬಂಟರ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶೋಭಾ ಶಿವಪ್ರಸಾದ್ ಹೆಗ್ಡೆ ಯವರು ತಮ್ಮ ತಂಡದೊಂದಿಗೆ ಸ್ವೀಕರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ ಲೋಕನಾಥ್ ಶೆಟ್ಟಿ , ಮಾಜಿ ಅಧ್ಯಕ್ಷರು ಬಂಟರ ಸಂಘ ಬಂಟವಾಳ ವಹಿಸಿದ್ದರು. ನೃತ್ಯ ಸಂಯೋಜನೆ ಹಾಗೂ ತರಬೇತಿಯನ್ನು ಟ್ವಿಸ್ಟರ್ಸ್ ಡಾನ್ಸ್ ಅಕಾಡೆಮಿ ಯ ನಿತಿನ್ ರವರು