ಮಂಗಳೂರಿನ ಹಂಪನಕಟ್ಟೆಯ ಓಪಿ ಆಟೋ ಪಾರ್ಕ್ ಬಳಿ ಭಾರೀ ಮಳೆಯಿಂದಾಗಿ ಕಾಂಪೌಂಡ್ ಗೋಡೆ ಕುಸಿತ ಘಟನಾಸ್ಥಳಕ್ಕೆ ವಿಧಾನ ಪರಿಷತ್ ಶಾಸಕ  ಐವನ್ ಡಿ'ಸೋಜ ಭೇಟಿ ನೀಡಿ ಪರಿಶೀಲನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ.

ಮಂಗಳೂರಿನ ಹಂಪನಕಟ್ಟೆ ಬಳಿ ಸರಕಾರಿ ವೆನ್ಲಾಕ್ Out Patient (OP)  ರಿಕ್ಷಾ ಪಾರ್ಕ್ ನ ಬಳಿ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಅವರಣ ಗೋಡೆ ಕುಸಿತಗೊಂಡಿದ್ದು ಇದರ ಬಳಿಯ  ಓಪಿ ಆಟೋ ಪಾರ್ಕ್ ಇದ್ದು  ಸಾರ್ವಜನಿಕರು ಒಡಾಡುವ ರಸ್ತೆಯಲ್ಲಿ ವಿಪರೀತ ಮಳೆಯಿಂದಾಗಿ  ವೆನ್ಲಾಕ್ ಆಸ್ಪತ್ರೆಯ ಅವರಣ ಗೋಡೆಯು ಬೀಳುವ ಸ್ಥಿಯಲ್ಲಿರುವುದನ್ನು ತಿಳಿದು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ಸ್ಥಳಕ್ಕೆ ಭೇಟಿ ನೀಡಿ ವೆನ್ಲಾಕ್ ಆಸ್ಪತ್ರೆಯ ಅಧಿಕಾಎಇಯಾದ ಡಾ| ತಿಮ್ಮಯ್ಯ ಹಾಗೂ ಆಸ್ಪತ್ರೆಯ ಮುಖ್ಯ ಶಸ್ತ್ರಚಿಕಿತ್ಸಕ ರಾದ ಶಿವಪ್ರಸಾದ್ ಇವರುಗಳನನ್ನು ಘಟನಾ ಸ್ಥಳಕ್ಕೆ ಕರೆಯಿಸಿ, ಅವರೊಂದಿಗೆ ಚರ್ಚಿಸಿ ಅಪಾಯ ಸ್ಥಿಯಲ್ಲಿರುವ ಸಾರ್ವಜನಿಕ ರಸ್ತೆಗೆ ವಾಲಿಕೊಂಡಿರುವ ಮರವೊಂದನ್ನು ತೆರವು ಗೊಳಿಸಲು ಅರಣ್ಯಾಧಿಕಾರಿಗೆ ಸೂಕ್ತ ಸಿರ್ದೇಶನ ನೀಡಿ ಕೂಡಲೇ ರವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.ಹಾಗೂ ಮುಂದೆ ಆಗುಚ ಅಪಘಾತವನ್ನು ತಪ್ಪಿಸಲು ಕ್ರಮ ಕೈಗೊಳ್ಳ ಬೇಕೆಂದು ತಿಳಿಸದರು. 

ಹಾಗೇಯೇ  ವಿಪರೀತ ಮಳೆ ತುಂಬಿದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಸಿಗುವಂತೆ ಕ್ರಮಕೈಗೊಳ್ಳುವುದಾಗಿ  ಈ ಸಂದರ್ಭದಲ್ಲಿ ತಿಳಿಸಿದರು. 

ಈ ಸಂರ್ಭದಲ್ಲಿ ಓಪಿ ಪಾರ್ಕ್ ನ ರಿಕ್ಷಾ ಚಾಲಕರು  ಉಪಸ್ಥಿತರಿದ್ದರು.