ಮಂಗಳೂರು: "ಭರವಸೆಯ ಯಾತ್ರಿಕರು" ಎಂಬ ಧ್ಯೇಯದೊಂದಿಗೆ ಬಿಜೈ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ನಿಂದ ಬೊಂದೇಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರಕ್ಕೆ ಜಪಮಾಲೆ ಪ್ರಾರ್ಥನೆ, ಭಕ್ತಿ ಗೀತೆಗಳೊಂದಿಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು. ಪುಣ್ಯ ಕ್ಷೇತ್ರದಲ್ಲಿ ಬಲಿ ಪೂಜೆ ಅರ್ಪೀಸಿ ಪರಮ ಪ್ರಸಾದದ ಆರಾಧನೆಯನ್ನು ನಡೆಸಲಾಯಿತು.

ಮನುಷ್ಯ ಜೀವನವೇ ಒಂದು ಪ್ರಯಾಣ. ಜೀವನದ ಈ ಪ್ರಯಾಣದಲ್ಲಿ ನಾವು ಅನುಭವಿಸುತ್ತಿರುವ ಎಲ್ಲಾ ಕಷ್ಟಗಳು ನಮ್ಮನ್ನು ಧೃತಿಗೆಡಿಸದೆ ಅವುಗಳನ್ನು ಧೈರ್ಯದಿಂದ ಎದುರಿಸಲು ಬೇಕಾದ ಕೃಪೆ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರಕ್ಕೆ ಕೈಗೊಂಡ ಪಾದಯಾತ್ರೆಯಿಂದ ದೊರಕಲಿ ಎಂದು, ಬಿಜೈ ಚರ್ಚ್ ಧರ್ಮಗುರು ವಂದನೀಯ ಜೆ .ಬಿ. ಸಲ್ಡಾನ ಪ್ರಾರ್ಥಿಸಿದರು.

ಪುಣ್ಯ ಕ್ಷೇತ್ರದ ಪ್ರಧಾನ ಧರ್ಮಗುರು ವಂದನೀಯ ಅಂಡ್ರು ಲಿಯೊ ಡಿಸೋಜಾ ಸ್ವಾಗತಿಸಿದರು. ಸಂತ ಲಾರೆನ್ಸ್ ಶಾಲೆಯ ಮುಖ್ಯ ಶಿಕ್ಷಕ ವಂದನೀಯ ಪೀಟರ್ ಗೊನ್ಸಾಲ್ವಿಸ್ ಧನ್ಯವಾದ ಸಮರ್ಪಿಸಿದರು.

ಬಿಜೈ ಚರ್ಚ್ ಧರ್ಮಗುರುಗಳಾದ ವಂದನೀಯ ನೊರ್ಮನ್ ಮಥಾಯಸ್, ವಂದನೀಯ ವಿನ್ಸೆಂಟ್ ಸಿಕ್ವೇರಾ, ವಂದನೀಯ ಜೊನ್ಸಾನ್ ಸಿಕ್ವೇರಾ, ಚರ್ಚ್ ಉಪಾಧ್ಯಕ್ಷ ಶ್ರೀ ಅಶೋಕ್ ಪಿಂಟೊ, ಕಾರ್ಯದರ್ಶಿ ಶ್ರೀಮತಿ ಅವಿತಾ ಪಿಂಟೊ, ಆಯೋಗಗಳ ಸಂಚಾಲಕ ಗೊಡ್ವಿನ್ ಪಿಂಟೊ ವಿವಿಧ ವಾಹಳೆಗಳ ಮುಖ್ಯಸ್ಥರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.