ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಲಾವಿರಾದ ರಾಜೇಂದ್ರ ಕೇದಿಗೆ ಅವರು ಮೇ 23 ಶುಕ್ರವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ರಾಜ್ಯದ ಅತ್ಯಂತ ಪ್ರತಿಷ್ಠಿತ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಪ್ರಶಸ್ತಿಯು ಅವರ ಅಚಲ ಸಮರ್ಪಣೆ, ಸೃಜನಶೀಲ ದೃಷ್ಟಿಕೋನ ಮತ್ತು ಕಲಾ ಜಗತ್ತಿಗೆ ನೀಡಿದ ದೀರ್ಘಕಾಲೀನ ಕೊಡುಗೆಗಳಿಗೆ ಸಂದ ಗೌರವವಾಗಿದೆ.