ಪುತ್ತೂರು: ಸಂತಫಿಲೋಮಿನಾ ಸ್ವಾಯತ್ತ ಕಾಲೇಜಿನ ಕನ್ನಡ ಸಂಘದ ಸುವರ್ಣ ಮಹೋತ್ಸವ ಅಂಗವಾಗಿ, ಕಾಲೇಜಿನ ಸ್ನಾತಕೋತ್ತರ ಸಭಾಭವನದಲ್ಲಿ  "ಸುಧನ್ವ"ಯಕ್ಷಗಾನ ತಾಳಮದ್ದಳೆ, ಕಾಲೇಜಿನ ಯಕ್ಷಕಲಾಕೇಂದ್ರದ ನಿರ್ದೇಶಕರು ಪ್ರಶಾಂತ್ ರೈ (ಭಾಗವತರು) ಸಾರಥ್ಯದಲ್ಲಿ, ಮೇ 21 ರಂದು ಬುಧವಾರ ನಡೆಯಿತು.  

ಜಬ್ಬಾರ್ ಸಮೋ (ಅರ್ಜುನ), ವಾಸುದೇವ ರಂಗನಾಥ ಭಟ್ (ಸುಧನ್ವ)ಮತ್ತು  ಪ್ರಸಾದ್ (ಶ್ರೀ ಕೃಷ್ಣ )ಅರ್ಥಧಾರಿಗಳಾಗಿ ಜನಮನ ರಂಜಿಸಿದರು. ಕಾಲೇಜಿನ ಪ್ರಾಚಾರ್ಯರಾದ  ರೆl ಡಾl ಆಂಟನಿ ಪ್ರಕಾಶ್ ಮಾಂತೇರೋ  ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕನ್ನಡ ವಿಭಾಗದ ಮುಖ್ಯಸ್ಥರು, ಡಾ. ವಿಜಯಕುಮಾರ್ ಮೊಳೆಯಾರ ಕಾರ್ಯಕ್ರಮ ಸಂಘಟಿಸಿದ್ದರು.ತೃತೀಯ  ಬಿ ಎಸ್ ಸಿ ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.